Air India : ದೆಹಲಿಗೆ ಹೊರಟಿದ್ದ 180 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವು ಪುಣೆ ವಿಮಾನ ನಿಲ್ದಾಣದ ರನ್ವೇ ಕಡೆಗೆ ಟ್ಯಾಕ್ಸಿ ನಡೆಸುತ್ತಿದ್ದಾಗ ಟಗ್ ಟ್ರಾಕ್ಟರ್ಗೆ ಡಿಕ್ಕಿಯಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿರುವ ಘಟನೆ ನಡೆದಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Loksabha Election : ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರ ಗಳನ್ನು ಇಟ್ಟಿದ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್ ಆಫ್ ಆಗಿದ್ದು, ಇದು ಅನುಮಾನಾಸ್ಪದವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ.
Pune shocking incident: ಶೌರ್ಯ ಖಡ್ವೆ ಮೃತ ಬಾಲಕ. ಸ್ನೇಹಿತರೊಂದಿಗೆ ಶೌರ್ಯ ಕ್ರಿಕೆಟ್ ಆಡುತ್ತಿದ್ದ. ಈ ವೇಳೆ ಶೌರ್ಯ ಬೌಲಿಂಗ್ ಮಾಡುತ್ತಿದ್ದ. ಆತನ ಎಸೆತಕ್ಕೆ ಬ್ಯಾಟ್ಸ್ಮನ್ ಬಲವಾಗಿ ಬ್ಯಾಟ್ ಬೀಸಿದ್ದಾನೆ. ಬಾಲ್ ನೇರವಾಗಿ ಬಂದು ಶೌರ್ಯನ ಮರ್ಮಾಂಗಕ್ಕೆ ಬಡಿದಿದೆ.
Fake Marriages: ಮದುವೆ ಹೆಸರಿನಲ್ಲಿ ಅವಿವಾಹಿತರಿಗೆ ಟೋಪಿ ಹಾಕುತ್ತಿದ್ದ 8 ಜನ ಮಹಿಳೆಯರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಘೋಲಿಯ ಕೇಘ್ನಾಂಡ್ ಫಾಟಾ ನಿವಾಸಿ ಜ್ಯೋತಿ ರವೀಂದ್ರ ಪಾಟೀಲ್(35), ವಿದ್ಯಾ ಸತೀಶ್ ಖಂಡೇಲ್ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು 4 ದಿನಗಳ ಕಾಲ ಕಸ್ಟಡಿಯಲ್ಲಿರಿಸಲಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.
Woman kills Husband: ಪದೇ ಪದೇ ಗಂಡನಿಂದ ನಿರಾಸೆ ಅನುಭವಿಸಿದ ರೇಣುಕಾಳಿಗೆ ಪತಿ ಮೇಲೆ ವಿಪರಿತ ಕೋಪ ಬಂದಿತ್ತು. ಹೀಗಾಗಿ ಇಬ್ಬರ ನಡುವೆ ಹಲವಾರು ಬಾರಿ ಜಗಳವೂ ನಡೆದಿತ್ತು ಎನ್ನಲಾಗಿದೆ.
Online Gaming Jackpot: ಇತ್ತೀಚೆಗೆ ಆನ್ಲೈನ್ ಕ್ರಿಕೆಟ್ ಗೇಮ್ನಲ್ಲಿ ಸೋಮನಾಥ್ 1.5 ಕೋಟಿ ಬಹುಮಾನ ಗೆಲ್ಲುವ ಮೂಲಕ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ ಸೋಮನಾಥ್ ವಿರುದ್ಧ ತನಿಖೆ ಕೈಗೊಂಡಿತ್ತು.
Go back Mr Crime Minister: ಪ್ರಧಾನಿ ಮೋದಿ ನಾಳೆ ಅಂದರೆ ಮಂಗಳವಾರ ಪುಣೆಗೆ ಭೇಟಿ ನೀಡಲಿದ್ದು, ದಗ್ದುಶೇತ್ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
Woman Rape Case in Pune: ಪತಿ 40 ಸಾವಿರ ರೂಪಾಯಿ ಸಾಲ ತೀರಿಸದೆ ಇದ್ದ ಕಾರಣಕ್ಕೆ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಜರುಗಿದೆ. ಹೆಂಡತಿಯನ್ನು ಅತ್ಯಾಚಾರ ಮಾಡುವ ದೃಶ್ಯಗಳ ವಿಡಿಯೋ ತೆಗೆದು ಬಳಿಕ ಹಲವು ಬಾರಿ ಬೆದರಿಕೆ ಹಾಕಿ ಹಿಂಸಾಚಾರ ಎಸಗಲಾಗಿದೆ.
Marathi Actor Ravindra Mahajani found dead: ಪುಣೆಯ ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿ ರವೀಂದ್ರ ವಾಸವಾಗಿದ್ದರು. ಅವರು ವಾಸಿಸುತ್ತಿದ್ದ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ಸೀರೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ನಂತರ ಹೇಳಿಕೆಯೊಂದರಲ್ಲಿ,ತಾವು ಸುರಕ್ಷಿತವಾಗಿದ್ದು,ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
Pune auto strike: ಬೈಕ್ ಟ್ಯಾಕ್ಸಿಗಳ ವಿರುದ್ಧ ಸಮರ ಸಾರಿದ್ದ ಆಟೋ ಚಾಲಕರು ನ. 28ರಂದು ಮುಷ್ಕರ ಪ್ರಾರಂಭಿಸಿದ್ದರು. ಬೈಕ್ ಟ್ಯಾಕ್ಸಿಗಳ ವಿರುದ್ಧ ಡಿ.10ರೊಳಗೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಹಿನ್ನೆಲೆ ಕೆಲವು ದಿನಗಳ ನಂತರ ಪ್ರತಿಭಟನೆ ಹಿಂಪಡೆದುಕೊಳ್ಳಲಾಗಿತ್ತು.
Pakistan Zindabad Slogans: ಪಿಎಫ್ಐ ಸಂಘಟನೆಯ ಮೇಲೆ ರಾಷ್ಟ್ರವ್ಯಾಪಿ ನಡೆಸಲಾಗಿರುವ ಎನ್ಐಎ ದಾಳಿ ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಇತ್ತೀಚೆಗಷ್ಟೇ ಪುಣೆಯ ಜಿಲ್ಲಾಧಿಕಾರಿ ಕಚೇರಿಯ ಎದುರು ಪಿಎಫ್ಐ ಪ್ರತಿಭಟನೆ ನಡೆಸಿತ್ತು.
Women Reservation: ಲೋಕಸಭೆ ಮತ್ತು ಎಲ್ಲಾ ರಾಝಾಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷು ಮೀಸಲಿಡುವ ಗುರಿನನ್ನು ಹೊಂದಿರುವ ಮಹಿಳಾ ಮೀಸಲಾತಿ ಕುರಿತು ಕೇಳಲಾದ ಪ್ರಶ್ನೆಗೆ ಶರದ್ ಪವಾರ್ ಉತ್ತರಿಸುತ್ತಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಜಲಪಾತವೊಂದರ ನಯನ ಮನೋಹರ ದೃಶ್ಯ ಕಂಡುಬರುತ್ತಿದೆ. ಈ ಜಲಪಾತದ ವಿಶೇಷತೆ ಏನೆಂದರೆ, ಪರ್ವತದ ಬದಿಯಿಂದ ಜಲಪಾತದ ನೀರು ಅತಿವೇಗದಲ್ಲಿ ಕೆಳಗೆ ಬೀಳುತ್ತದೆ. ಆದರೆ ಅಚ್ಚರಿಯ ಸಂಗತಿ ಎಂದರೆ ನೀರು ಕೆಳಗೆ ಬೀಳುವ ಬದಲು ಹಿಮ್ಮುಖವಾಗಿ ಮೇಲೆ ಚಿಮ್ಮುತ್ತಿದೆ. ಇದಕ್ಕೇ ವೈಜ್ಞಾನಿಕ ಕಾರಣವೂ ಇದೆ.
Omicron BA.5 Variant Found In Pune: ವರದಿಗಳ ಪ್ರಕಾರ ಈ ವ್ಯಕ್ತಿಯು ಮೇ 21 ರಂದು ಇಂಗ್ಲೆಂಡ್ನಿಂದ ಭಾರತಕ್ಕೆ ಆಗಮಿಸಿದ್ದಾರೆ ಮತ್ತು ಲ್ಯಾಬ್ ವರದಿಯಲ್ಲಿ ಅವರು ಓಮಿಕ್ರಾನ್ನ ಉಪ-ರೂಪಾಂತರಿ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಲಾಗಿದೆ.
ಈ ಬಗ್ಗೆ ಪುಣೆ ರೈಲ್ವೆ ವಿಭಾಗದ ಹಿರಿಯ ಡಿಎಫ್ಸಿ ಉದಯ್ ಸಿಂಗ್ ಪವಾರ್ ಮಾತನಾಡಿದ್ದು, "ಸದ್ಯ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಅದು ಕೇವಲ ಜಿಲೆಟಿನ್ ಕಡ್ಡಿಗಳು. ನಾವು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ. ಚಿಂತಿಸಬೇಕಾಗಿಲ್ಲ" ಎಂದು ಹೇಳಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಹದಿಹರೆಯದ ಸಹೋದರ ಮತ್ತು ಅವರ ತಂದೆ ಪ್ರತ್ಯೇಕವಾಗಿ ಅತ್ಯಾಚಾರವೆಸಗಿದ್ದಾರೆ ಮತ್ತು ಆಕೆಯ ಅಜ್ಜ ಮತ್ತು ದೂರದ ಚಿಕ್ಕಪ್ಪ ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದು ಪುಣೆ ಪೊಲೀಸರು ಶನಿವಾರ ತಿಳಿಸಿದ್ದಾರೆ, ಕಳೆದ ಐದು ವರ್ಷಗಳಿಂದ ಈ ಅಪರಾಧವನ್ನು ಎಸಗಲಾಗಿದೆ ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.