Bird flu: ಕಾಡಂಚಿನ ಗ್ರಾಮ ಮೇಲುಕಾಮನಹಳ್ಳಿ ಸುತ್ತಮುತ್ತಲಿನಲ್ಲಿ ಸಾಕು ಕೋಳಿಗಳು ಸಾಮೂಹಿಕವಾಗಿ ಮೃತವಾಗುತ್ತಿರುವುದರಿಂದ ಹಕ್ಕಿ ಜ್ವರ ಹರಡಿರಬಹುದು ಎಂಬ ಆತಂಕ ಎದುರಾಗಿದೆ. ಗ್ರಾಮದಲ್ಲಿ ಅನೇಕರು ಮನೆಗಳಲ್ಲಿ ನಾಟಿ ತಳಿಯ ಕೋಳಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದರು.
Bird Flu Variant: ಕೊರೊನಾ ವೈರಸ್ನ ಹೆಚ್ಚುತ್ತಿರುವ ಸೋಂಕಿನ ಮಧ್ಯೆ, ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (OIE) ಹಕ್ಕಿಜ್ವರದ ಒಂದಕ್ಕಿಂತ ಹೆಚ್ಚು ರೂಪಾಂತರಗಳ ಉಪಸ್ಥಿತಿಯಿಂದಾಗಿ, ಇದು ಮನುಷ್ಯರಿಗೆ ಹರಡುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.
First Human Case Of Bird Flu H10N3: ಚೀನಾದಲ್ಲಿ (China) ಇದೇ ಮೊದಲ ಬಾರಿಗೆ ಮಾನವನಲ್ಲಿ ಬರ್ಡ್ ಫ್ಲೂ ಪತ್ತೆಯಾಗಿದೆ. 41 ವರ್ಷದ ವ್ಯಕ್ತಿಯೋರ್ವನಲ್ಲಿ ಬರ್ಡ್ ಫ್ಲೂನ H10N3 ಸ್ಟ್ರೆನ್ ಪತ್ತೆಯಾಗಿದೆ. ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ (China NHC) ಇದನ್ನು ದೃಢಪಡಿಸಿದೆ.
ಪೆರ್ವೊ ವೈರಸ್ (Canine parvovirus) ಅಪಾಯಕಾರಿ ಸಾಂಕ್ರಾಮಿಕ ವೈರಸ್. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಅದು ಮಾರಕವಾಗಬಹುದು. ಹಾಗಾಗಿ ಈ ವೈರಸ್ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ನಾಯಿಗಳಲ್ಲಿ ಸುಲಭವಾಗಿ ಹರಡುತ್ತದೆ.
ರಷ್ಯಾದ ಆರೋಗ್ಯ ಇಲಾಖೆ ಮೊದಲು ಪಕ್ಷಿಗಳಿಗೆ ಫ್ಲೂ ವೈರಸ್ ಹರಡುವುದನ್ನು ದೃಢಪಡಿಸಿತು ಮತ್ತು ಕೋಳಿ ಸಾಕಾಣಿಕೆ ಕೇಂದ್ರದ ಏಳು ಉದ್ಯೋಗಿಗಳಲ್ಲಿ ಎಚ್ 5 ಎನ್ 8 (H5N8) ಏವಿಯನ್ ಜ್ವರ ಕಂಡುಬಂದಿದೆ ಎಂದು ವರದಿ ಮಾಡಿದೆ. ರೋಸ್ಪೊಟ್ರೆಬ್ನಾಜೋರ್ನ ವೆಕ್ಟರ್ ಸಂಶೋಧನಾ ಕೇಂದ್ರವು ಮಾನವರಲ್ಲಿ ಈ ವೈರಸ್ನ್ನು ಕಂಡುಹಿಡಿದಿದೆ.
ಪಕ್ಷಿ ಜ್ವರ ಅಂದರೆ ಬರ್ಡ್ ಫ್ಲೂ ದೇಶದಲ್ಲಿ ಭೀತಿ ಸೃಷ್ಟಿಸಿದೆ. ಹೇಗಾದರೂ ಸದ್ಯಕ್ಕೆ ಮನುಷ್ಯರಲ್ಲಿ ಬರ್ಡ್ ಫ್ಲೂ ಹರಡುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಈ ವೈರಸ್ ಮಾನವರಲ್ಲಿ ಹರಡುವುದಿಲ್ಲ ಎಂದು ನಿಖರವಾಗಿ ಹೇಳಲೂ ಕೂಡ ಸಾಧ್ಯವಿಲ್ಲ. ಪಕ್ಷಿ ಜ್ವರ ಲಕ್ಷಣಗಳು ಮತ್ತು ಯಾವಾಗ ವೈದ್ಯರನ್ನು ಭೇಟಿ ಮಾಡಬೇಕೆಂದು ತಿಳಿಯೋಣ.
ಕೋಳಿ ಜ್ವರ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಈ ಹೊತ್ತಲ್ಲಿ ಚಿಕನ್ ತಿನ್ನೋದು ಎಷ್ಟು ಸೇಫ್. ಚಿಕನ್ ಖಾದ್ಯ ಹೇಗೆ ತಯಾರಿ ಮಾಡಬೇಕು. ಗ್ರಿಲ್ಡ್ , ತಂದೂರಿ ಚಿಕನ್ ತಿನ್ನಬಹುದಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮಹಾರಾಷ್ಟ್ರದ ಪರಭಾನಿ ಜಿಲ್ಲೆಯಲ್ಲಿ ಪಕ್ಷಿ ಜ್ವರದಿಂದಾಗಿ 900 ಕೋಳಿಗಳು ಸಾವನ್ನಪ್ಪಿದ ನಂತರ, ರಾಜ್ಯ ಸರ್ಕಾರವು ಕಾರ್ಯರೂಪಕ್ಕೆ ಬಂದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು ಸಂಜೆ 5 ಗಂಟೆಗೆ ತುರ್ತು ಸಭೆ ಕರೆದು ಪರಿಸ್ಥಿತಿ ಕುರಿತು ಚರ್ಚಿಸಲಿದ್ದಾರೆ.
Bird Flu: ಹಕ್ಕಿ ಜ್ವರದ ಹಿನ್ನೆಲೆ ಕರ್ನಾಟಕ ಹಾಗೂ ಕೇರಳದ ಗಡಿಗೆ ಹೊಂದಿಕೊಂಡಂತೆ ಇರುವ ಪ್ರದೇಶಗಳಲ್ಲಿ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಕರ್ನಾಟಕದ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಅಲರ್ಟ್ ಜಾರಿಗೊಳಿಸಲಾಗಿದೆ.
ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ವಿವಿಧ ರೀತಿಯ ಪಕ್ಷಿ ಜ್ವರಗಳಿಂದಾಗಿ ಸುಮಾರು 25 ಸಾವಿರ ಪಕ್ಷಿಗಳು ಸಾವನ್ನಪ್ಪಿವೆ. ಅರಣ್ಯ ಪ್ರದೇಶಗಳಲ್ಲಿ ಮತ್ತು ಜಲಮೂಲಗಳ ಸಮೀಪವಿರುವ ಪಕ್ಷಿಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.