ವಿಷ್ಣುವರ್ಧನ್ ಕೈಗೆ ಧರಿಸುತ್ತಿದ್ದ ಕಡಗ ನೀಡಿದ್ದು ಇವರೇ ! ಈಗ ಯಾರ ಬಳಿ ಇದೆ ಗೊತ್ತಾ ಅದು ?

ಹಿರಿಯ ನಟ ವಿಷ್ಣುವರ್ಧನ್ ಅಂದ ಕೂಡಲೇ ಈಗಲೂ ಕಣ್ಣಿಗೆ ಕಟ್ಟುವುದು ಅವರ ಕೈಯ್ಯಲ್ಲಿ ಇದ್ದ ಕಡಗ. ಪ್ರತೀ ಒಂದು ಸಿನಿಮಾದಲ್ಲಿಯೂ ವಿಷ್ಣುವರ್ಧನ ಆ ಕಡಗ ಹಾಕಿಕೊಂಡೇ ಇರುತ್ತಿದ್ದರು. 

Vishnuvardhana kada : ವಿಷ್ಣುವರ್ಧನ್ ತನ್ನ ಎಲ್ಲಾ ಸಿನಿಮಾದಲ್ಲಿಯೂ ಕೈಯ್ಯಲ್ಲಿ ಒಂದು ಕಡ ಧರಿಸುತ್ತಿದ್ದರು. ಅದು ಅವರ ಒಂದು ಗುರುತಾಗಿಯೇ ಉಳಿದಿತ್ತು, ಅವರ ಅಭಿಮಾನಿಗಳು ಕೂಡಾ ಕದ ಹಾಕಿಕೊಂಡು ವಿಷ್ಣುವರ್ಧನ್ ಅವರನ್ನು ಅನುಕರಿಸುತ್ತಿದ್ದರು. ಆದ್ರೆ ಈ ಕಡದ ಹಿಂದೆ ಒಂದು ಕತೆ ಇದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಹಿರಿಯ ನಟ ವಿಷ್ಣುವರ್ಧನ್ ಅಂದ ಕೂಡಲೇ ಈಗಲೂ ಕಣ್ಣಿಗೆ ಕಟ್ಟುವುದು ಅವರ ಕೈಯ್ಯಲ್ಲಿ ಇದ್ದ ಕಡಗ. ಪ್ರತೀ ಒಂದು ಸಿನಿಮಾದಲ್ಲಿಯೂ ವಿಷ್ಣುವರ್ಧನ ಆ ಕಡಗ ಹಾಕಿಕೊಂಡೇ ಇರುತ್ತಿದ್ದರು. 

2 /7

ವಿಷ್ಣುವರ್ಧನ್  ಈ ಕಡಗವನ್ನು ಶೋಕಿಗಾಗಿ ಹಾಕಿಕೊಳ್ಳುತ್ತಿರಲಿಲ್ಲ. ಅವರು ಒಂದು ಮಹತ್ವದ ಕಾರಣದಿಂದಲೇ ಈ ಕಡಗವನ್ನು ಹಾಕಿಕೊಳ್ಳುತ್ತಿದ್ದರು. 

3 /7

೧೯೮೦ರ ಬಳಿಕ ಪ್ರತಿ ಸಿನಿಮಾದಲ್ಲಿಯೂ ವಿಷ್ಣುವರ್ಧನ್ ಈ ಕಡ  ಹಾಕಿಕೊಂಡಿದ್ದಾರೆ. ಆದರೆ ಗುರು ಶಿಷ್ಯರು ಒಂದು ಸಿನಿಮಾದಲ್ಲಿ ಮಾತ್ರ ಅವರ ಕೈಯ್ಯಲ್ಲಿ ಈ ಕಡ ಕಾಣ ಸಿಗುವುದಿಲ್ಲ.   

4 /7

ಈ ಕಡಗ ನನ್ನ ಜೀವನದ ಅವಿಭಾಜ್ಯ ಅಂಗ ಎನ್ನುವುದನ್ನು ವಿಷ್ಣುವರ್ಧನ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೆ ಈ ಕಡಗ ಇಲ್ಲದೆ ಅವರು ಮನೆಯಿಂದ ಹೊರಗೆ ಹೋಗುತ್ತಲೇ ಇರಲಿಲ್ಲವಂತೆ.   

5 /7

ಅಂದ ಹಾಗೆ ಅವರಿಗೆ ಈ ಕಡಗವನ್ನು ಗುರುದ್ವಾರದ ಗುರುಗಳು ನೀಡಿದ್ದರಂತೆ. ಬೀದರ್ ನಲ್ಲಿ ೧೯೮೦ರಲ್ಲಿ ಗುರುಗಳು ಈ ಕಡಗ ನೀಡಿದ್ದರು. ಅಂದಿನಿಂದ ವಿಷ್ಣುವರ್ಧನ್ ಕೊನೆ ಕ್ಷಣದವರೆಗೂ ಅವರು ಆ ಕಡಗವನ್ನು ತೆಗೆಯಲೇ ಇಲ್ಲ. 

6 /7

ಇನ್ನು ವಿಷ್ಣುವರ್ಧನ್ ಲೆಫ್ಟಿ. ಅಂದರೆ ಬಲ ಗೈಗಿಂತ ಎಡಗೈ ಬಳಕೆ ಜಾಸ್ತಿ. ಅವರ ಎರಡೂ ಕೈಗಳ ತೂಕ ಭಿನ್ನವಾಗಿತ್ತು. ಅದನ್ನು ಸರಿದೂಗಿಸಲು ವಿಷ್ಣುವರ್ಧನ್ ಈ ಕಡಗ ಹಾಕಿಕೊಳ್ಳಲೇ ಬೇಕಿತ್ತಂತೆ. 

7 /7

ವಿಷ್ಣುವರ್ಧನ್ ನಿಧನದ ಬಳಿಕ ಆ ಕಡವನ್ನು ಅವರ ಕುಟುಂಬದವರು ತೆಗೆದಿಟ್ಟಿ ದ್ದಾರೆಯಂತೆ. ಅಂದರೆ ಅದು ಈಗಲೂ ಅವರ ಕುಟುಂಬದ ಬಳಿಯೇ ಇದೆ ಎಂದು ಹೇಳಲಾಗುತ್ತಿದೆ.