ನೀವು ರೈಲಿನಲ್ಲಿ ಮುಂಬೈಗೆ ಹೋಗುತ್ತಿರುವಿರಾ? ಹಾಗಾದರೆ ಈ ಸುದ್ದಿ ನಿಮಗಾಗಿ!

ನೀವು ರೈಲಿನಲ್ಲಿ ಮುಂಬೈಗೆ ಹೋಗುತ್ತಿರುವಿರಾ? ಹಾಗಾದರೆ ಈ ಸುದ್ದಿ ನಿಮಗಾಗಿ! ಪ್ರಯಾಣಿಕರೇ ಗಮನಿಸಿ! ಭಾರತೀಯ ರೈಲ್ವೇ ಶನಿವಾರ ರಾತ್ರಿ (ನವೆಂಬರ್ 19) ರಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ದಕ್ಷಿಣ ಮುಂಬೈನ ಮಸೀದಿ ಬಂದರ್ ನಿಲ್ದಾಣದ ನಡುವೆ 27 ಗಂಟೆಗಳ ಬಂದ್ ಸಂಚಾರ ಸ್ಥಗಿತಗೊಳ್ಳಲಿದೆ.ಆದ್ದರಿಂದ, ಈ ನಿಲ್ದಾಣಗಳ ನಡುವಿನ ರೈಲು ಸೇವೆಗಳನ್ನು ನವೆಂಬರ್ 21 ರವರೆಗೆ ಸ್ಥಗಿತಗೊಳಿಸಲಾಗುತ್ತದೆ.

Written by - Zee Kannada News Desk | Last Updated : Nov 19, 2022, 08:09 PM IST
  • ಬ್ರಿಟಿಷರ ಕಾಲದ ಕಾರ್ನಾಕ್ ಸೇತುವೆಯನ್ನು ಕೆಡವಲು ಸೆಂಟ್ರಲ್ ರೈಲ್ವೆ ಈ ಮೆಗಾ ಬ್ಲಾಕ್ ಅನ್ನು ನಡೆಸುತ್ತಿದೆ.
  • ಮೆಗಾ ಬ್ಲಾಕ್ ರಾತ್ರಿ 11 ಗಂಟೆಗೆ (ನವೆಂಬರ್ 19 ರಂದು) ಪ್ರಾರಂಭವಾಗುತ್ತದೆ
  • ಮತ್ತು ನವೆಂಬರ್ 21 ರಂದು ಬೆಳಗಿನ ಜಾವ 2 ಗಂಟೆಗೆ ಕೊನೆಗೊಳ್ಳುತ್ತದೆ,
ನೀವು ರೈಲಿನಲ್ಲಿ ಮುಂಬೈಗೆ ಹೋಗುತ್ತಿರುವಿರಾ? ಹಾಗಾದರೆ ಈ ಸುದ್ದಿ ನಿಮಗಾಗಿ! title=
file photo

ಮುಂಬೈ: ನೀವು ರೈಲಿನಲ್ಲಿ ಮುಂಬೈಗೆ ಹೋಗುತ್ತಿರುವಿರಾ? ಹಾಗಾದರೆ ಈ ಸುದ್ದಿ ನಿಮಗಾಗಿ! ಪ್ರಯಾಣಿಕರೇ ಗಮನಿಸಿ! ಭಾರತೀಯ ರೈಲ್ವೇ ಶನಿವಾರ ರಾತ್ರಿ (ನವೆಂಬರ್ 19) ರಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ದಕ್ಷಿಣ ಮುಂಬೈನ ಮಸೀದಿ ಬಂದರ್ ನಿಲ್ದಾಣದ ನಡುವೆ 27 ಗಂಟೆಗಳ ಬಂದ್ ಸಂಚಾರ ಸ್ಥಗಿತಗೊಳ್ಳಲಿದೆ.ಆದ್ದರಿಂದ, ಈ ನಿಲ್ದಾಣಗಳ ನಡುವಿನ ರೈಲು ಸೇವೆಗಳನ್ನು ನವೆಂಬರ್ 21 ರವರೆಗೆ ಸ್ಥಗಿತಗೊಳಿಸಲಾಗುತ್ತದೆ.

ಬ್ರಿಟಿಷರ ಕಾಲದ ಕಾರ್ನಾಕ್ ಸೇತುವೆಯನ್ನು ಕೆಡವಲು ಸೆಂಟ್ರಲ್ ರೈಲ್ವೆ ಈ ಮೆಗಾ ಬ್ಲಾಕ್ ಅನ್ನು ನಡೆಸುತ್ತಿದೆ.ಮೆಗಾ ಬ್ಲಾಕ್ ನವೆಂಬರ್ 19 ರಂದು ಪ್ರಾರಂಭವಾಗಿ ನವೆಂಬರ್ 21 ರಂದು ಬೆಳಗಿನ ಜಾವ 2 ಗಂಟೆಗೆ ಕೊನೆಗೊಳ್ಳುತ್ತದೆ, ಇದರಿಂದಾಗಿ ಈ ಅವಧಿಯಲ್ಲಿ ಉಪನಗರ ಮತ್ತು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುತ್ತದೆ.

ವಿಶೇಷ ಬ್ಲಾಕ್‌ನಿಂದ ಪ್ರತಿದಿನ 37 ಲಕ್ಷಕ್ಕೂ ಹೆಚ್ಚು ಸ್ಥಳೀಯ ರೈಲು ಪ್ರಯಾಣಿಕರು ಹಾಗೂ ಹೊರ ನಿಲ್ದಾಣದ ರೈಲುಗಳಲ್ಲಿ ಪ್ರಯಾಣಿಸುವವರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 1,800 ಕ್ಕೂ ಹೆಚ್ಚು ಸ್ಥಳೀಯ ರೈಲು ಸೇವೆಗಳು ಸೆಂಟ್ರಲ್ ರೈಲ್ವೆಯ ಮುಂಬೈ ಉಪನಗರ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತವೆ, ಇದು ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಆರಂಭವಾಗುವ 'ಹಾರ್ಬರ್' ಮತ್ತು 'ಮುಖ್ಯ' ಮಾರ್ಗಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಬಡ ಮಕ್ಕಳ ಹಾಲಿಗೂ ಕನ್ನ : ʼಕ್ಷೀರಭಾಗ್ಯʼ ಕಾಳಸಂತೆಯಲ್ಲಿ ಮಾರಾಟ..!

ಈ ಸೇತುವೆಯನ್ನು 1866-67 ರಲ್ಲಿ ನಿರ್ಮಿಸಲಾಗಿದ್ದು,  2018 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿಬಿ) ಯ ಪರಿಣಿತ ತಂಡವು ಇದನ್ನು ಅಸುರಕ್ಷಿತವೆಂದು ಘೋಷಿಸಿತು, ಈ ಹಿನ್ನೆಲೆಯಲ್ಲಿ ಅದರ ಮೇಲೆ ಭಾರೀ ವಾಹನಗಳ ಸಂಚಾರವನ್ನು 2014 ರಲ್ಲಿ ನಿಲ್ಲಿಸಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ರಸ್ತೆ ಸಂಚಾರಕ್ಕೆ ಅಸುರಕ್ಷಿತವೆಂದು ಘೋಷಿಸಲಾದ ಕಾರ್ನಾಕ್ ಸೇತುವೆಯನ್ನು ಕೆಡವಲು ಬ್ಲಾಕ್ ಅನ್ನು ನಿರ್ವಹಿಸಲಾಗುವುದು" ಎಂದು ಅಧಿಕಾರ ಹೇಳಿದ್ದರು.

ಕಬ್ಬಿಣದ ಸೇತುವೆಯ ಬಹುಭಾಗವನ್ನು ಈಗಾಗಲೇ ಕೆಡವಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ, ನಿರ್ಬಂಧದ ಸಮಯದಲ್ಲಿ, ಸೇತುವೆಯ (ROB) ಮೇಲಿನ ರೈಲ್ವೆಯ ಕಬ್ಬಿಣದ ರಚನೆಯನ್ನು ಮಾತ್ರ ರಸ್ತೆ ಕ್ರೇನ್‌ಗಳ ಸಹಾಯದಿಂದ ಕತ್ತರಿಸಿ ತೆಗೆಯಲಾಗುತ್ತದೆ.ಸಿಆರ್ ಜನರಲ್ ಮ್ಯಾನೇಜರ್ ಅನಿಲ್ ಕುಮಾರ್ ಲಾಹೋಟಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಜನೀಶ್ ಕುಮಾರ್ ಗೋಯಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಶುಕ್ರವಾರ ನೆಲಸಮ ಕಾಮಗಾರಿಯನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹನಿ ಟ್ರಾಪ್ ಹನಿಗಳು ಸಿಎಂ ಕಚೇರಿಯಲ್ಲಿ ಬಿದ್ದಿದ್ದರ ಬಗ್ಗೆ ಸಿಎಂ ಬೊಮ್ಮಾಯಿ ಮಾತಾಡ್ಬೇಕು: ಕಾಂಗ್ರೆಸ್

"ಹೆರಿಟೇಜ್ ಸೇತುವೆಯು ನಿರ್ಮಾಣದ ವರ್ಷವನ್ನು ಉಲ್ಲೇಖಿಸುವ ಶಾಸನಗಳೊಂದಿಗೆ ಕೆಲವು ಆರು ಕಲ್ಲುಗಳನ್ನು ಹೊಂದಿದೆ. ಇವುಗಳನ್ನು ಹೆರಿಟೇಜ್ ಗಲ್ಲಿ ಅಥವಾ ಮ್ಯೂಸಿಯಂ ಪ್ರದೇಶದಲ್ಲಿ ಸೂಕ್ತವಾಗಿ ಸಂರಕ್ಷಿಸಲಾಗುವುದು" ಎಂದು ಸಿಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News