ಸುದೀಪ್‌-ದರ್ಶನ್‌ ಸ್ನೇಹದ ಮಧ್ಯೆಯಾದ ಸಮಸ್ಯೆಯೇನು ಗೊತ್ತೇ? ಅಸಲಿ ಸತ್ಯ ಬಿಚ್ಚಿಟ್ಟ ಕಿಚ್ಚ!

Kiccha Sudeep: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ನಿನ್ನೆಯಷ್ಟೇ  ಬಿಗ್‌ಬಾಸ್ ಕನ್ನಡ ಸೀಸನ್‌ 10 ಶೋ ಮುಗಿಸಿ ರಿಲ್ಯಾಕ್ಸ್‌ ಮೋಡ್‌ನಲ್ಲಿರುವ ಈ ನಟ, ಟ್ವಿಟರ್‌ನಲ್ಲಿ ಆಸ್ಕ್‌ ಕಿಚ್ಚ ಅನ್ನೂ ಸ್ಪೆಷಲ್‌ ಸೆಷನ್ ನಡೆಸಿದ್ದರು. ಆಗ ಅಭಿಮಾನಿಗಳು ದರ್ಶನ್ ಬಗ್ಗೆ  ಕೇಳಿದ ಎರಡು ಪ್ರಶ್ನೆಗಳಿಗೂ ಸುದೀಪ್ ಉತ್ತರಿಸಿದ್ದಾರೆ.  

Written by - Zee Kannada News Desk | Last Updated : Jan 29, 2024, 09:45 AM IST
  • ಕಳೆದ ಹತ್ತು ವರ್ಷದಿಂದ ಸುದೀಪ್‌ ಚಿತ್ರಗಳಲ್ಲಿ ನಟಿಸುವುದರ ಜೊತಗೆ ಬಿಗ್‌ಬಾಸ್‌ ರಿಯಾಲಿಟಿ ಶೋನ ನಿರೂಪಕರಾಗಿ ಅದ್ಬುತವಾಗಿ ನಡೆಸಿಕೊಂಡು ಬರ್ತಾಯಿದ್ದಾರೆ.
  • ಬಿಗ್‌ಬಾಸ್‌ ಗ್ರ್ಯಾಂಡ್‌ ಫಿನಾಲೆ ಚಿತ್ರೀಕರಣ ಶನಿವಾರದಿಂದಲೇ ಆರಂಭವಾಗಿದ್ದು, ಹಲವು ಗಂಟೆಗಳ ಕಾಲ ವೇದಿಕೆ ಮೇಲೆ ನಿಂತಿದ್ದ ಸುದೀಪ್‌ ಇದೀಗ ರಿಲ್ಯಾಕ್ಸ್ ಮಾಡುತ್ತಿದ್ದಾರೆ.
  • ನಿನ್ನೆಯಷ್ಟೇ ಸುದೀಪ್‌ ಬಿಗ್‌ಬಾಸ್ ಶೋ ಮುಗಿಸಿ ರಿಲ್ಯಾಕ್ಸ್‌ ಮೋಡ್‌ನಲ್ಲಿರುವ ಈ ನಟ ಟ್ವಿಟ್ಟರ್‌ನಲ್ಲಿ ಆಸ್ಕ್‌ ಕಿಚ್ಚ ಸೆಷನ್ ನಡೆಸಿದ್ದು, ಆ ವೇಳೆ ಸಾಕ್ಷಷ್ಟು ಅಭಿಮಾನಿಗಳು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಸುದೀಪ್‌-ದರ್ಶನ್‌ ಸ್ನೇಹದ ಮಧ್ಯೆಯಾದ ಸಮಸ್ಯೆಯೇನು ಗೊತ್ತೇ? ಅಸಲಿ ಸತ್ಯ ಬಿಚ್ಚಿಟ್ಟ ಕಿಚ್ಚ! title=

Sudeepʼs Askkiccha Session On Twitter: ಚಂದನವನದ ಸ್ಟಾರ್‌ ನಟ ಅಭಿನಯ ಚಕ್ರವರ್ತಿ ಚಿತ್ರರಂಗದಲ್ಲಿ ಸುಮಾರು ವರ್ಷಗಳಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಇದೀಗ ಈ ನಟಿ 'ಮ್ಯಾಕ್ಸ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಹತ್ತು ವರ್ಷದಿಂದ ಸುದೀಪ್‌ ಚಿತ್ರಗಳಲ್ಲಿ ನಟಿಸುವುದರ ಜೊತಗೆ ಬಿಗ್‌ಬಾಸ್‌ ರಿಯಾಲಿಟಿ ಶೋನ ನಿರೂಪಕರಾಗಿ ಅದ್ಬುತವಾಗಿ ನಡೆಸಿಕೊಂಡು ಬರ್ತಾಯಿದ್ದಾರೆ. ಇದೀಗ ಕಿಚ್ಚ ಸುದೀಪ್‌ ಬಿಗ್‌ಬಾಸ್ ಕನ್ನಡ ಸೀಸನ್ 10 ಶೋ ಮುಗಿಸಿ ಕೊಂಚ ರಿಲಾಕ್ಸ್‌ ಆಗಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಕಾರ್ತಿಕ್ ಮಹೇಶ್ ಈ ಬಾರಿ ವಿಜೇತರಾಗಿದ್ದು, ಅದಕ್ಕೂ ಮುನ್ನ ಬಿಗ್‌ಬಾಸ್ 10 ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಸುದೀಪ್‌ಗೆ ನಿರೂಪಣೆ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ನಟ ಕಿಚ್ಚ ಸುದೀಪ್‌ 10 ವರ್ಷಗಳ ಬಿಗ್‌ಬಾಸ್ ಜರ್ನಿಯ ಸ್ಪೆಷಲ್ ಝಲಕ್ ಕೂಡ ಪ್ಲೇ ಮಾಡಲಾಗಿತ್ತು.  ಬಿಗ್‌ಬಾಸ್‌ ಗ್ರ್ಯಾಂಡ್‌ ಫಿನಾಲೆ ಚಿತ್ರೀಕರಣ ಶನಿವಾರದಿಂದಲೇ ಆರಂಭವಾಗಿದ್ದು, ಹಲವು ಗಂಟೆಗಳ ಕಾಲ ವೇದಿಕೆ ಮೇಲೆ ನಿಂತಿದ್ದ ಸುದೀಪ್‌ ಇದೀಗ ರಿಲ್ಯಾಕ್ಸ್ ಮಾಡುತ್ತಿದ್ದಾರೆ. 

ಇದನ್ನೂ ಓದಿ: ಸದ್ಗುರುಗಳಿಂದ ದೀಕ್ಷೆ ಪಡೆದ ಮಿಲ್ಕಿ ಬ್ಯೂಟಿ: ತಮನ್ನಾ ಹಿಂಗ್ಯಾಕೆ ಮಾಡಿದ್ರು?

ನಿನ್ನೆಯಷ್ಟೇ ಸುದೀಪ್‌ ಬಿಗ್‌ಬಾಸ್ ಶೋ ಮುಗಿಸಿ ರಿಲ್ಯಾಕ್ಸ್‌ ಮೋಡ್‌ನಲ್ಲಿರುವ  ಈ ನಟ ಟ್ವಿಟ್ಟರ್‌ನಲ್ಲಿ  ಆಸ್ಕ್‌ ಕಿಚ್ಚ ಅನ್ನೂ ಸ್ಪೆಷಲ್‌ ಸೆಷನ್ ನಡೆಸಿದ್ದು, ಆ ವೇಳೆ ಸಾಕ್ಷಷ್ಟು ಅಭಿಮಾನಿಗಳು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆ ಸಂದರ್ಭದಲ್ಲಿ  ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಸುದೀಪ್‌ ಪ್ರತಿಕ್ರಿಯಿಸಿದ್ದಾರೆ. ಆಗ ಸ್ಯಾಂಡಲ್‌ವುಡ್‌ನಲ್ಲಿ ವಿಷ್ಣುವರ್ಧನ್‌-ಅಂಬರೀಶ್‌ ಕುಚಿಕು ಗೆಳೆಯರೆಂದು ಕರೆಸಿದ ನಂತರ, ಮತ್ತೊಂದು ಕುಚಿಕು ಸ್ನೇಹಿತರೆಂದರೇ ಸುದೀಪ್‌-ದರ್ಶನ್‌. ಹಲವು ವರ್ಷಗಳಿಂದೆ ಇಬ್ಬರರ ಸ್ನೇಹದ ಮಧ್ಯೆ ಬಿರುಕು ಮೂಡಿದ್ದು, ಇದರ ಬಗ್ಗೆ ಅಭಿಮಾನಿಗಳು ಕೇಳಿದ ಎರಡು ಪ್ರಶ್ನೆಗಳಿಗೂ ಸುದೀಪ್ ಉತ್ತರಿಸಿದ್ದಾರೆ. 

ಆಸ್ಕ್‌ ಕಿಚ್ಚ ಸ್ಪೆಷಲ್‌ ಸೆಷನ್‌ನಲ್ಲಿ ಅಭಿಮಾನಿಯೊಬ್ಬರು ಸರ್, "ನಿಮ್ಮ ಹಾಗೂ ದರ್ಶನ್ ಅವರ ನಡುವಿನ ಸಮಸ್ಯೆ ಯಾವಾಗ ಬಗೆಹರಿಸಿಕೊಳ್ಳುತ್ತೀರಾ? ಇನ್ನು ಎಷ್ಟು ಸಮಯ ತಗೋತ್ತೀರಾ?" ಎಂದು ಕೇಳಿದ್ದಾರೆ. ಇದಕ್ಕೆ ಸುದೀಪ್ ರಿಪ್ಲೇ ಮಾಡಿ, "ಸಮಸ್ಯೆ ಏನು ಅಂತ ಇಬ್ಬರೂ ಹುಡುಕುತ್ತಾ ಇದ್ದೀವಿ" ಎಂದು ನಗುವ ಎಮೋಜಿ ಹಾಕಿದ್ದಾರೆ. ಹಾಗೆಯೇ ಮತ್ತೊಬ್ಬ ಅಭಿಮಾನಿ "ದರ್ಶನ್ ಬಗ್ಗೆ ಒಂದು ಪದದಲ್ಲಿ ಹೇಳಿ" ಎಂದು ಕೇಳಿದಕ್ಕೆ ಸುದೀಪ್ "ಆತನಿಗೆ ಸದಾ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ" ಎಂದು ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News