ಬಿಗ್‌ ಬಾಸ್‌ ಟ್ರೋಫಿ ಗೆಲ್ಲಲು ಹಣ ಕೊಟ್ಟಿದ್ದಾರಂತೆ ಈ ಸ್ಪರ್ಧಿ! ವಿವಾದಕ್ಕೆ ಸಿಲುಕಿದ ನಟಿ

Bigg Boss Winner: ಜನಪ್ರಿಯ ರಿಯಾಲಿಟಿ ಶೋ ತಮಿಳು ಬಿಗ್ ಬಾಸ್ ಇತ್ತೀಚೆಗೆಷ್ಟೇ ಫಿನಾಲೆ ಮುಗಿಸಿತು.. ಆದರೆ ಇದೀಗ ಬವಸೀಸನ್ 7 ವಿನ್ನರ್‌ ಪಟ್ಟ ಪಡೆದುಕೊಂಡ ನಟಿ ಅರ್ಚನಾ ಅವರ ಕುರಿತಾಗಿ ಅನೇಕ ಟೀಕೆಗಳು ಹರಿದುಬರುತ್ತಿವೆ..   

Written by - Savita M B | Last Updated : Jan 17, 2024, 09:10 AM IST
  • ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ಕಳೆದ ವಾರ ಕೊನೆಗೊಂಡಿತು
  • ಇದರಲ್ಲಿ ಅರ್ಚನಾ ಅಭಿಮಾನಿಗಳ ಬೆಂಬಲದೊಂದಿಗೆ ಪ್ರಶಸ್ತಿಯನ್ನು ಗೆದ್ದರು
  • ವಿನ್ನರ್‌ ಪಟ್ಟ ಪಡೆದುಕೊಂಡ ನಟಿ ಅರ್ಚನಾ ಅವರ ಕುರಿತಾಗಿ ಅನೇಕ ಟೀಕೆಗಳು ಹರಿದುಬರುತ್ತಿವೆ..
ಬಿಗ್‌ ಬಾಸ್‌ ಟ್ರೋಫಿ ಗೆಲ್ಲಲು ಹಣ ಕೊಟ್ಟಿದ್ದಾರಂತೆ ಈ ಸ್ಪರ್ಧಿ! ವಿವಾದಕ್ಕೆ ಸಿಲುಕಿದ ನಟಿ  title=

Bigg Boss News: ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ಕಳೆದ ವಾರ ಕೊನೆಗೊಂಡಿತು.. ಇದರಲ್ಲಿ ಅರ್ಚನಾ ಅಭಿಮಾನಿಗಳ ಬೆಂಬಲದೊಂದಿಗೆ ಪ್ರಶಸ್ತಿಯನ್ನು ಗೆದ್ದರು. ದ್ವಿತೀಯ ಸ್ಥಾನವನ್ನು ಮಣಿಚಂದ್ರ ಹಾಗೂ ತೃತೀಯ ಸ್ಥಾನವನ್ನು ಮಾಯಾ ಪಡೆದರು.

ಬಿಗ್ ಬಾಸ್ ಟೈಟಲ್ ವಿನ್ನರ್ ಆಗಿ ಅರ್ಚನಾ ಆಯ್ಕೆಯಾಗಿರುವ ಬಗ್ಗೆ ಸೆಕೆಂಡ್‌ ರನ್ನರ್‌ ಅಪ್‌ ಮಾಯಾ ಹಾಕಿರುವ ಪೋಸ್ಟ್ ಇದೀಗ ಸಂಚಲನ ಮೂಡಿಸಿದೆ.. ಹೌದು ಅರ್ಚನಾ ಬಿಗ್ ಬಾಸ್ ವಿನ್ನರ್ ಎಂದು ಜನ ಒಪ್ಪಿಕೊಂಡರೂ ಮಾಯಾ ಒಪ್ಪಿಕೊಂಡಿಲ್ಲ.. ಬಿಗ್ ಬಾಸ್ ವಿನ್ನರ್‌ ಅರ್ಚನಾ ಎಂದು ಘೋಷಿಸಿದಾಗ ಮಾಯಾ ಮುಖವು ಕೋಪದಿಂದ ಕೆಂಪಾಗಿತ್ತು... 

ಇದನ್ನೂ ಓದಿ-ಸಲಾರ್ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌..! ಡಿಜಿಟಲ್ ನಲ್ಲಿ ರೆಬೆಲ್ ಸ್ಟಾರ್ ಅಬ್ಬರಿಸೋದು ಯಾವಾಗ ಗೊತ್ತಾ?

ಹೀಗಾಗಿ ಇದುವರೆಗೂ ಮಾಯಾ ಅವರ ಕೆಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅರ್ಚನಾ ಅವರು ಟೈಟಲ್ ವಿನ್ನರ್ ಎಂಬುದನ್ನು ಅವರಿಂದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಸ್ಪಷ್ಟನೆ ಅಭಿಮಾನಿಗಳಲ್ಲಿ ಮೂಡಿದೆ... ಇದಲ್ಲದೆ, ಅರ್ಚನಾ ವಿನ್ನರ್‌ ಆಗಲು ಹಣ ನೀಡಿದ್ದಾರೆ.. ಎಂದು ಮಾಯಾ ಪರೋಕ್ಷವಾಗಿ ಆರೋಪಿಸಿದ್ದಾರೆ.. 

ಇದನ್ನೂ ಓದಿ-Bigg Boss: ಈ ಬಾರಿ ಬಿಗ್ ಬಾಸ್ ವಿನ್ನರ್’ಗೆ ಅದೃಷ್ಟವೋ ಅದೃಷ್ಟ! ಗೆದ್ದವರಿಗೆ ಸಿಗುವ ಬಹುಮಾನ ಮೊತ್ತ ಎಷ್ಟು ಗೊತ್ತಾ?

ಸದ್ಯ ಮಾಯಾ ತಮ್ಮ ಪೋಸ್ಟ್‌ನಲ್ಲಿ, 'ಹಣ ಕೊಟ್ಟು ಪ್ರಶಸ್ತಿ ಗೆಲ್ಲಬಹುದು, ಆದರೆ ಜನರ ಪ್ರೀತಿಯನ್ನು ಗೆಲ್ಲಲು ಸಾಧ್ಯವಿಲ್ಲ, ಅದು ನನಗೆ ಸಿಕ್ಕಿತು' ಎಂದು ಬರೆದಿದ್ದಾರೆ. 

ಮತ್ತೊಂದು ಪೋಸ್ಟ್‌ನಲ್ಲಿ "ಡಿಯರ್‌ ವಿನ್ನರ್‌ ಆಗಿದ್ದಕ್ಕಾಗಿ ನಿಮಗೆ ಅಭಿನಂದನೆಗಳು.. ನಿಮ್ಮ ಜೀವನದಲ್ಲಿ ನಿನ್ನ ಆಸೆಯಂತೆ ಹೂಗಳು ಅರಳಲಿ... ಗಿಡ ಬಾಡಿದಂತೆ ಕಂಡರೆ ನನ್ನನ್ನು ಕೂಗು... ನಾನೇ ಬಂದು ನೀರು ಹಾಕುತ್ತೇನೆ.. ನಿನ್ನೊಂದಿಗೆ ಯಾವಾಗಲೂ ಇರುವೆ ಎಂದು ಪ್ರಮಾಣ ಮಾಡುತ್ತೇನೆ" ಎಂದಿದ್ದಾರೆ.. 

ಬಿಗ್ ಬಾಸ್ ಅಭಿಮಾನಿಗಳಲ್ಲಿ ಕೆಲವರು... ಮಾಯಾ ಅವರಿಗೆ ವಿನ್ನರ್‌ ಪಟ್ಟ ಸಿಗದೇ ಇರುವುದನ್ನು ಒಪ್ಪಲಾರದೆ ಬಿಗ್ ಬಾಸ್ ಆಟ ಎನ್ನುವುದನ್ನು ಮರೆತು ಅರ್ಚನಾ ಮೇಲೆ ಕೆಂಡ ಕಾರುತ್ತಿದ್ದಾರೆ ಎಂದು ಅವರನ್ನು ಟೀಕಿಸುತ್ತಿದ್ದಾರೆ.. ಆದರೆ ಅರ್ಚನಾ ನಿಜಕ್ಕೂ ಜನರ ಮನ ಗೆದ್ದು.. ಪ್ರಶಸ್ತಿ ಗೆದ್ದಿದ್ದಾರೆ ಎನ್ನುವುದು ಅವರ ಫ್ಯಾನ್ಸ್‌ ಅಭಿಪ್ರಾಯ..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News