T20 World Cup: ಹಾರ್ದಿಕ್ ಪಾಂಡ್ಯ ಬದಲು ಈ ಆಟಗಾರನಿಗೆ ನೀಡಬೇಕಿತ್ತು ಉಪನಾಯಕನ ಪಟ್ಟ : ಇರ್ಫಾನ್ ಪಠಾಣ್ ಒಲವು ಯಾರ ಕಡೆ ?

T20 World Cup: 2007 ರ ಟಿ 20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಇರ್ಫಾನ್ ಪಠಾಣ್,  ಅನೇಕ ಬಾರಿ ಹಾರ್ದಿಕ್ ಪಾಂಡ್ಯ ವಿರುದ್ದ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಈ ಬಾರಿ ಕೂಡಾ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡಿರುವ ಅಪಸ್ವರ ಎತ್ತಿದ್ದಾರೆ.

Written by - Ranjitha R K | Last Updated : May 2, 2024, 11:52 AM IST
  • ಜೂನ್‌ನಲ್ಲಿ ನಡೆಯಲಿರುವ ICC T20 ವಿಶ್ವಕಪ್ 2024
  • ಹಾರ್ದಿಕ್ ಪಾಂಡ್ಯ ಉಪನಾಯಕರಾಗಿರುವ ಬಗ್ಗೆ ಅಪಸ್ವರ
  • ಹಾರ್ದಿಕ್ ಪಾಂಡ್ಯಗೆ ವಿಶೇಷ ವಿನಾಯಿತಿ ನೀಡಿರುವ ಬಗ್ಗೆ ಟೀಕೆ
T20 World Cup: ಹಾರ್ದಿಕ್ ಪಾಂಡ್ಯ ಬದಲು ಈ ಆಟಗಾರನಿಗೆ ನೀಡಬೇಕಿತ್ತು ಉಪನಾಯಕನ ಪಟ್ಟ : ಇರ್ಫಾನ್  ಪಠಾಣ್ ಒಲವು ಯಾರ ಕಡೆ ?   title=

T20 World Cup 2024 : ಜೂನ್‌ನಲ್ಲಿ ನಡೆಯಲಿರುವ ICC T20 ವಿಶ್ವಕಪ್ 2024 ಗೆ ಹಾರ್ದಿಕ್ ಪಾಂಡ್ಯ ಅವರನ್ನು ಟೀಮ್ ಇಂಡಿಯಾದ ಉಪನಾಯಕನನ್ನಾಗಿ ಮಾಡಲಾಗಿದೆ.ಈ ಪಂದ್ಯಾವಳಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಅಪಸ್ವರ ಎತ್ತಿದ್ದಾರೆ. ಮುಂಬರುವ ಟಿ 20 ವಿಶ್ವಕಪ್‌ನಲ್ಲಿ  ಪಾಂಡ್ಯ ಬದಲು ಆ ಸ್ಥಾನಕ್ಕೆ ಯಾರು ಸರಿಯಾದ ಆಯ್ಕೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. 

ಹಾರ್ದಿಕ್ ಪಾಂಡ್ಯ ಉಪನಾಯಕರಾಗಿರುವ ಬಗ್ಗೆ ಅಪಸ್ವರ : 
2007 ರ ಟಿ 20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಇರ್ಫಾನ್ ಪಠಾಣ್,  ಅನೇಕ ಬಾರಿ ಹಾರ್ದಿಕ್ ಪಾಂಡ್ಯ ವಿರುದ್ದ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. 'ಟಿ20 ವಿಶ್ವಕಪ್ ನಂತರ ಹೊಸ ಯೋಜನೆ ಇದ್ದು, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸಂಭಾವ್ಯ ನಾಯಕರನ್ನಾಗಿಸಿ ಯುವ ತಂಡವನ್ನು ನಿರ್ಮಿಸುವ ಗುರಿಯನ್ನು ಇರ್ಫಾನ್ ಹೊಂದಿದ್ದರು.ಆದರೆ, ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನದ ಸ್ಥಿರತೆ ಅವರ ಬದ್ದತೆಯನ್ನೇ ಪ್ರಶ್ನಿಸುವಂತಾಯಿತು. 

ಇದನ್ನೂ ಓದಿ : IPL 2024: ಮಯಾಂಕ್ ಯಾದವ್‌ಗೆ ಶೀಘ್ರದಲ್ಲೇ ಈ ದೊಡ್ಡ ಉಡುಗೊರೆ ನೀಡಲಿದೆ ಬಿಸಿಸಿಐ..!  

ಪಠಾಣ್ ಆಕ್ಷೇಪ ಏನು ? : 
ಹಾರ್ದಿಕ್ ಪಾಂಡ್ಯ ಸುಮಾರು ಐದು ವರ್ಷಗಳಿಂದ ಬರೋಡಾ ಪರ ಯಾವುದೇ ದೇಶೀಯ ಕ್ರಿಕೆಟ್ ಆಡಿಲ್ಲ. ಈ ಬಗ್ಗೆಯೂ ಪಠಾಣ್ ಗೆ ಆಕ್ಷೇಪವಿದೆ. "ವರ್ಷವಿಡೀ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಬೇಕಾದರೆ ದೇಶೀಯ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಭಾಗವಹಿಸುವುದು ಅವಶ್ಯಕ.ಆಟದಲ್ಲಿ ಗಾಯವಾಗುವುದು ಸಹಜ. ಆದರೆ ದೇಶೀಯ ಕ್ರಿಕೆಟ್ ಸೇರಿದಂತೆ ಸ್ಥಿರವಾದ ಪಂದ್ಯದೊಂದಿಗೆ ಸರಿಯಾದ ಯೋಜನೆ ಆಟಗಾರನ ಪುನರಾಗಮನಕ್ಕೆ ಬಹಳ ಮುಖ್ಯ. 

ಹಾರ್ದಿಕ್ ಪಾಂಡ್ಯಗೆ ವಿಶೇಷ ವಿನಾಯಿತಿ ನೀಡಿರುವ ಬಗ್ಗೆ ಟೀಕೆ : 
ಗಾಯಗೊಂಡಿರುವ ಆಟಗಾರ ನೇರವಾಗಿ ತಂಡಕ್ಕೆ ಮರಳುವಂತಾಗಬಾರದು.   ಇದು ತಂಡದ ಉಳಿದ ಆಟಗಾರರಿಗೆ ತಪ್ಪು ಸಂದೇಶವನ್ನು ಕಳುಹಿಸುತ್ತದೆ ಎಂದು ಹೇಳಿದ್ದಾರೆ. ಅಂದರೆ ತಮ್ಮ ಹೇಳಿಕೆ ಮೂಲಕ ಇರ್ಫಾನ್ ಪಠಾಣ್,ಹಾರ್ದಿಕ್ ಪಾಂಡ್ಯಗೆ ವಿಶೇಷ ವಿನಾಯಿತಿ ನೀಡಿರುವುದನ್ನು ಟೀಕಿಸಿದ್ದಾರೆ.ಒಬ್ಬ ಆಟಗಾರನಿಗೆ ವಿಶೇಷ ಪ್ರಾಧಾನ್ಯತೆ ನೀಡುವುದನ್ನು ನೋಡಿದಾಗ ಅದು ತಂಡದ ವಾತಾವರಣವನ್ನು ಹಾಳು ಮಾಡುತ್ತದೆ. ಕ್ರಿಕೆಟ್ ಟೆನಿಸ್‌ನಂತಲ್ಲ, ಅದು ಸಾಂಘಿಕ ಕ್ರೀಡೆಯಾಗಿದ್ದು ಅಲ್ಲಿ ಸಮಾನತೆ ಮುಖ್ಯವಾಗಿದೆ. ಪ್ರತಿಯೊಬ್ಬ ಆಟಗಾರನನ್ನು ನ್ಯಾಯಯುತವಾಗಿ ಮತ್ತು ಸಮಾನವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ :ಟಿ20 ವಿಶ್ವಕಪ್ 2024: ಅಫ್ಘಾನಿಸ್ತಾನ ವಿಶ್ವಕಪ್ ತಂಡ ಪ್ರಕಟ, ನಾಯಕನಾಗಿ ರಶೀದ್ ಖಾನ್

ಈ ಆಟಗಾರನಿಗೆ ಸಿಗಬೇಕಿತ್ತು ಅವಕಾಶ : 
ಅಂತರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲಿ 300ಕ್ಕೂ ಹೆಚ್ಚು ವಿಕೆಟ್ ಮತ್ತು 2700 ಕ್ಕೂ ಹೆಚ್ಚು ರನ್ ಗಳಿಸಿರುವ ಇರ್ಫಾನ್ ಪಠಾಣ್, ಹಾರ್ದಿಕ್ ಪಾಂಡ್ಯ ಭಾರತದ ಉಪನಾಯಕನಾಗಲು ಅರ್ಹರಲ್ಲ ಎಂದು ಹೇಳಿದ್ದಾರೆ.ಪ್ರಸ್ತುತ ಕಾರ್ಯಕ್ಷಮತೆಯನ್ನು ಪರಿಗಣಿಸಿ,ಆಯ್ಕೆದಾರರು  ಸರಿಯಾದ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಪಾಂಡ್ಯ ಬದಲು ಬುಮ್ರಾ ಅವರನ್ನು ಉಪನಾಯಕನನ್ನಾಗಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವಂತೆ ಮಾತನಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News