Seetha Raama : ಸೀತಾ ಪಾಲಿಗೆ ರಾಮನೇ ಶ್ರೀರಕ್ಷೆ.. ರುದ್ರಪ್ರತಾಪ್‌ ಜೊತೆ ಮುರಿದು ಬಿತ್ತು ಮದುವೆ!

Seetha Raama Serial : ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್‌ ರೋಚಕ ಹಂತ ತಲುಪಿದೆ. ಸೀತಾಳ ಮದುವೆ ತಡೆಯಲು ರಾಮ ಓಡೋಡಿ ಬರುತ್ತಾನೆ.   

Written by - Chetana Devarmani | Last Updated : Dec 30, 2023, 01:28 PM IST
  • ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್‌
  • ಸೀತಾಳ ಮದುವೆ ತಡೆಯಲು ರಾಮ ಓಡೋಡಿ ಬರುತ್ತಾನೆ
  • ರುದ್ರಪ್ರತಾಪನ ಒಳಸಂಚು ಸೀತಾ ಮಗಳು ಸಿಹಿಗೆ ಗೊತ್ತಾಗಿದೆ
Seetha Raama : ಸೀತಾ ಪಾಲಿಗೆ ರಾಮನೇ ಶ್ರೀರಕ್ಷೆ.. ರುದ್ರಪ್ರತಾಪ್‌ ಜೊತೆ ಮುರಿದು ಬಿತ್ತು ಮದುವೆ!  title=

Seetha Raama Serial : ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್‌ ರೋಚಕ ಹಂತ ತಲುಪಿದೆ. ಸೀತಾಳ ಮದುವೆ ತಡೆಯಲು ರಾಮ ಓಡೋಡಿ ಬರುತ್ತಾನೆ. ನೋಡುಗರ ಆಸೆಯೂ ಸೀತಾ ಮದುವೆ ರುದ್ರಪ್ರತಾಪನ ಜೊತೆ ನಡೆಯಬಾರದೆಂಬುದೇ ಆಗಿರುತ್ತದೆ. ಹಾಗೆಯೇ ಸೀತಾ ಮದುವೆ ಈಗ ನಿಂತಿದೆ.

ಹಸೆಮಣೆ ಮೇಲೆ ಕೂತ ಸೀತಾ, ರಾಮನನ್ನು ಕಂಡೊಡಣೆ ಓಡಿ ಬರುತ್ತಾಳೆ. ಇಬ್ಬರ ಮುಖದಲ್ಲೂ ಪ್ರೀತಿಯ ಮಂದಹಾಸ ಮೂಡಿದೆ. ಕಣ್ಣುಗಳಲ್ಲೇ ಪ್ರೇಮ ವಿನಿಮಯವಾಗಿದೆ. ರಾಮನ ಎದೆಗೆ ಅಪ್ಪಿದ್ದಾಳೆ ಸೀತಾ. ಸೀತಾ ರಾಮ ಕಲ್ಯಾಣ ಹಾಡು ಕೂಡ ಈ ವೇಳೆ ಹಿಂದಿನಿಂದ ಕೇಳುತ್ತಿದೆ. ಆದರೆ ಅಷ್ಟರಲ್ಲಿ ರಾಮನಿಗೆ ಎಚ್ಚರವಾಗಿದೆ. ಇದೆಲ್ಲ ರಾಮನ ಕನಸಿನಲ್ಲಿ ಕಂಡ ದೃಶ್ಯ. 

ಇದನ್ನೂ ಓದಿ : Prabhas dinner cost: ಪ್ರಭಾಸ್ 1 ದಿನದ ಊಟಕ್ಕೆ ಎಷ್ಟು ಲಕ್ಷ ಖರ್ಚು ಮಾಡ್ತಾರೆ ಗೊತ್ತಾ..! 

ಮತ್ತೊಂದು ಕಡೆಯಲ್ಲಿ ರುದ್ರಪ್ರತಾಪನ ಒಳಸಂಚು ಸೀತಾ ಮಗಳು ಸಿಹಿಗೆ ಗೊತ್ತಾಗಿದೆ. ರುದ್ರಪ್ರತಾಪನ ಬಗ್ಗೆ ಅಮ್ಮನಿಗೆ ಹೇಳಲು ಸಿಹಿ ಕಷ್ಟಪಡುತ್ತಿದ್ದಾಳೆ. ಆತನ ಕಣ್ತಪ್ಪಿಸಿ ಓಡಾಡುತ್ತಿದ್ದಾಳೆ. ಫ್ರೆಂಡ್‌ ರಾಮನಿಗೆ ಕರೆ ಮಾಡಿದ್ದಾಳೆ. ಆದರೆ ರಾಮ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ. ರಾಮ ಮದುವೆ ಮಂಟಪದಿಂದ ಮರಳಿ ಅಶೋಕನಿದ್ದ ಕಾರ್‌ ಏರಿದ್ದಾನೆ. ಇತ್ತ ರಾಮನಿಗಾಗಿಯೇ ಸಿಹಿ ಹುಡುಕುತ್ತಿದ್ದಾಳೆ. ನಂತರ ರಾಮ ಜೆಟ್‌ ಏರಿ ಕುಳಿತುಕೊಳ್ಳುತ್ತಾನೆ. ಮದುವೆ ಮೆನಯಲ್ಲಿ ಸೀತಾ ಸಿಹಿಯನ್ನ ಹುಡುಕಿದ್ದಾಳೆ. ಸಿಹಿ ಇಲ್ಲದೆ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಸೀತಾ ಮದುವೆ ತಡೆದು ನಿಂತಿದ್ದಾಳೆ.

ರಾಮ ತನ್ನ ಫೋನ್‌ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಸೀತಾ ಮೊಬೈಲ್‌ನಿಂದ ಅನೇಕ ಕಾಲ್‌ ಬಂದಿದ್ದು ರಾಮನಿಗೆ ಗೊತ್ತಾಗಿದೆ. ಸಿಹಿ ಕಳುಹಿಸಿದ ವಾಯ್ಸ್‌ ನೋಟ್‌ ನ್ನು ಸಹ ರಾಮ ಕೇಳಿದ್ದಾನೆ. ಲಾಯರ್‌ ರುದ್ರಪ್ರತಾಪನ ಅಸಲಿ ಬಣ್ಣ ಬಯಲು ಮಾಡಲು ರಾಮ ಕಲ್ಯಾಣ ಮಂಟಪದತ್ತ ಬಂದಿದ್ದಾನೆ. ರುದ್ರಪ್ರತಾಪನ ಇನ್ನೊಂದು ಮುಖವನ್ನು ಅಶೋಕನಿಗೆ ತಿಳಿಸಿ, ಪೊಲೀಸ್‌ ಕಂಪ್ಲೇಂಟ್ ಕೊಡಲು ಹೇಳಿದ್ದಾನೆ. 

ರುದ್ರಪ್ರತಾಪನ ಕಡೆಯ ಹುಡುಗರು ಸಿಹಿಯನ್ನು ಹಿಡಿದು ಕೂರಿಸಿದ್ದಾರೆ. ಇತ್ತ ಮದುವೆ ಆಗಿಯೇ ಬಿಡ್ತು ಎಂದು ರುದ್ರಪ್ರತಾಪ್  ಬೀಗುವಷ್ಟರಲ್ಲಿಯೇ ನಿಲ್ಲಿಸಿ.. ಎಂದು ರಾಮನ ಎಂಟ್ರಿ ಕೊಟ್ಟಿದ್ದಾನೆ.  ಮದುವೆ ನಿಂತಾಯ್ತು.. ಮುಂದೆ ಏನಿರಬಹುದು? ಎಂಬುದನ್ನು ಸೋಮವಾರದ ಸಂಚಿಕೆಯಲ್ಲಿಯೇ ನೋಡಬೇಕು. 

ಇದನ್ನೂ ಓದಿ : ಅಂದು ಅಲ್ಲು ಅರ್ಜುನ್ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ಸ್ಟಾರ್‌ ನಟ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News