BBK‌ 10: ನಮ್ರತಾಗೆ ಅದೃಷ್ಟ ತಂದ ಡ್ರೋನ್‌ ಪ್ರತಾಪ್: ಕಿಚ್ಚನ ಚಪ್ಪಾಳೆ ಎಲ್ಲಿ ಸಿಗತ್ತೆಂದ ಸುದೀಪ್!

Bigg Boss: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಶೋನಲ್ಲಿ ಈ ವಾಋ ನಮ್ರತಾಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು, ಡ್ರೋನ್‌ ಪ್ರತಾಪ್‌ಗೆ ನಿಮ್ಮಿಂದಲೇ ನನಗೆ ಉತ್ತಮ, ಕಿಚ್ಚನ ಚಪ್ಪಾಳೆ ಸಿಕ್ಕಿದೆ ಎಂದು ಹೇಳಿದರು.  

Written by - Zee Kannada News Desk | Last Updated : Dec 3, 2023, 09:56 AM IST
  • ಕಳೆದವಾರ ನಮ್ರತಾ ಗೌಡ, ಈ ಕಡೆ ಕಳಪೆನೂ ಅಲ್ಲ, ಉತ್ತಮನೂ ಇಲ್ಲ, ಕಿಚ್ಚನ ಚಪ್ಪಾಳೆಯೂ ಇಲ್ಲ, ಕ್ಯಾಪ್ಟನ್ ಅಲ್ಲ. ನಾನ್ಯಾಕೆ ಇಲ್ಲಿದೀನಿ" ಎಂದು ಪದೇ ಪದೇ ಹೇಳಿಕೊಂಡು ಅತ್ತಿದ್ದರು.
  • ಕಳೆದ ವಾರ ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡಗೆ ವೀಕ್ಷಕರಿಂದ ಹೆಚ್ಚಿನ ಮತ ಸಿಕ್ಕಿದರಿಂದ ನಮ್ರತಾ ತುಂಬ ಬೇಸರ ಮಾಡಿಕೊಂಡಿದರು.
  • ಕಿಚ್ಚನ ಚಪ್ಪಾಳೆ ಕೊಡಿಸ್ತೀನಿ ಅಂತ ಪ್ರತಾಪ್ ಹೇಳಿದ್ದರ ಬಗ್ಗೆಯೂ ಸುದೀಪ್ ಪ್ರಶ್ನೆ ಮಾಡಿ, "ಈ ಕಿಚ್ಚನ ಚಪ್ಪಾಳೆ ಎಲ್ಲಿ ಸಿಗತ್ತೆ?" ಅಂತ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದರು.
BBK‌ 10: ನಮ್ರತಾಗೆ ಅದೃಷ್ಟ ತಂದ ಡ್ರೋನ್‌ ಪ್ರತಾಪ್: ಕಿಚ್ಚನ ಚಪ್ಪಾಳೆ ಎಲ್ಲಿ ಸಿಗತ್ತೆಂದ ಸುದೀಪ್! title=

Namratha And Drone Prathap In BBK: ಬಿಗ್‌ಬಾಸ್‌ ಮನೆಯಲ್ಲಿ ಕಳೆದವಾರ ನಮ್ರತಾ ಗೌಡ, ಈ ಕಡೆ ಕಳಪೆನೂ ಅಲ್ಲ, ಉತ್ತಮನೂ ಇಲ್ಲ, ಕಿಚ್ಚನ ಚಪ್ಪಾಳೆಯೂ ಇಲ್ಲ, ಕ್ಯಾಪ್ಟನ್ ಅಲ್ಲ. ನಾನ್ಯಾಕೆ ಇಲ್ಲಿದೀನಿ" ಎಂದು ಪದೇ ಪದೇ ಹೇಳಿಕೊಂಡು ಅತ್ತಿದ್ದರು. ಇತ್ತ ನಮ್ರತಾ ಗೌಡ ಯಾವ ಟಾಸ್ಕ್‌ನಲ್ಲಿಯೂ ಚೆನ್ನಾಗಿ ಆಡಿಲ್ಲ, ಸ್ನೇಹಿತ್ ಜೊತೆ ತಿರುಗಾಡಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಅಂತ ಇಡೀ ಮನೆಯವರು ಮಾತಾಡಿಕೊಂಡಿದ್ದು, ಈಕೆ ಪ್ರತಿ ಬಾರಿ ಎಲಿಮಿನೇಶನ್ ವೇಳೆ ಕೊನೆಯ ಸುತ್ತಿನಲ್ಲಿ ಸೇವ್ ಆಗಿ ಉಳಿದುಕೊಳ್ಳುತ್ತಿದ್ದ ಕಾರಣ ಈಕೆಗೆ ಬಹಳ ಬೇಸರವಾಗಿದೆ.

ಕಳೆದ ವಾರ ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡಗೆ ವೀಕ್ಷಕರಿಂದ ಹೆಚ್ಚಿನ ಮತ ಸಿಕ್ಕಿದರಿಂದ ನಮ್ರತಾ ತುಂಬ ಬೇಸರ ಮಾಡಿಕೊಂಡಿದ್ದು, ಜೊತೆಗೆ ಸಿಕ್ಕಾಪಟ್ಟೆ ಕೂಗಾಡುವ ತನಿಷಾ ಜನರಿಗೆ ಇಷ್ಟ ಆಗ್ತಾರೆ, ನಾನು ಹೊರಗಡೆ ಸುಮ್ಮನೆ ಪ್ರಾಜೆಕ್ಟ್ ಮಾಡಿಕೊಂಡು ಇರಬಹುದಿತ್ತು ಎಂದು ನಮ್ರತಾ ಹೇಳಿದ್ದರು. ಆದರೆ ಈ ವಾರ ಅವರ ಲಕ್ ಬದಲಾಗಿ, ಇವರ ಪ್ರತಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಈ ವಾರವೇ ನಮ್ರತಾ ಗೌಡ ಸ್ಪರ್ಧಿಗಳ ಕಣ್ಣಲ್ಲಿ 'ಉತ್ತಮ' ಪಟ್ಟದ ಜೊತೆಗೆ ಕಿಚ್ಚ ಸುದೀಪ್‌ನಿಂದ 'ಕಿಚ್ಚನ ಚಪ್ಪಾಳೆ'ಯನ್ನು ಕೂಡ ಪಡೆದರು."ಇಷ್ಟುದಿನ ನಾನು ಯಾಕೆ ಇಲ್ಲಿದೀನಿ ಅಂತ ಗೊತ್ತಾಗ್ತಿರಲಿಲ್ಲ" ಎಂದು  ಹೇಳಿದ್ದ ನಮ್ರತಾ ಗೌಡ, ನಿನ್ನೆ ಡ್ರೋನ್ ಪ್ರತಾಪ್‌ಗೆ "ನಿಮ್ಮಿಂದಲೇ ನನಗೆ ಉತ್ತಮ, ಕಿಚ್ಚನ ಚಪ್ಪಾಳೆ ಸಿಕ್ಕಿದೆ. ನಿಮ್ಮ ತಂಡಕ್ಕೆ ಬಂದಿದ್ದಕ್ಕೆ ಇದೆಲ್ಲ ಸಿಕ್ಕಿದೆ" ಎಂದು ಹೇಳಿದ್ದರು.

ಇದನ್ನೂ ಓದಿ: ಜಗಳ ಆಗದೇ ಇರೋ ಥರ ಆಡೋಕೆ ನೀವೇನು ಉಸ್ತುವಾರಿ ಮಾಡ್ತಿದ್ದಿರಾ?- ಡ್ರೋಣ್ ಪ್ರತಾಪ್ ಹೇಳಿಕೆಗೆ ಕಿಚ್ಚ ಗರಂ

ಡ್ರೋನ್ ಪ್ರತಾಪ್ "ನಿಮಗೆ ಉತ್ತಮ ಕೊಡಿಸ್ತೀನಿ, ಕಿಚ್ಚನ ಚಪ್ಪಾಳೆ ಕೊಡಿಸ್ತೀನಿ" ಅಂತಲೇ ನಮ್ರತಾ ಗೌಡಗೆ ಸಾಕಷ್ಟು ಬಾರಿ ಮಾತು ಕೊಟ್ಟಿದ್ದಕ್ಕೆ ನಮ್ರತಾ ಪ್ರತಾಪ್ ತಂಡಕ್ಕೆ ಬಂದರೇ, ಕ್ಯಾಪ್ಟನ್ಸಿ ಟಾಸ್ಕ್ ಆಟದಿಂದ ಈಕೆಯನ್ನು ಪ್ರತಾಪ್ ಹೊರಗಡೆ ಇಟ್ಟಿದಕ್ಕೆ ನಮ್ರತಾ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದರು. ಕಿಚ್ಚನ ಚಪ್ಪಾಳೆ ಕೊಡಿಸ್ತೀನಿ ಅಂತ ಪ್ರತಾಪ್ ಹೇಳಿದ್ದರ ಬಗ್ಗೆಯೂ ಸುದೀಪ್ ಪ್ರಶ್ನೆ ಮಾಡಿ, "ಈ ಕಿಚ್ಚನ ಚಪ್ಪಾಳೆ ಎಲ್ಲಿ ಸಿಗತ್ತೆ?" ಅಂತ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದಾಗ, ಪ್ರತಾಪ್, "ಎಲ್ಲಿಯೂ ಸಿಗಲ್ಲ, ಚೆನ್ನಾಗಿ ಆಟ ಆಡುವಂತೆ ಮಾಡ್ತೀನಿ" ಅಂತ ಹೇಳಿದ್ದರು.

ಬಿಗ್‌ಬಾಸ್‌ ನೀಡಿದ ಟಾಸ್ಕ್‌ನಲ್ಲಿ ತನಿಷಾ ಕುಪ್ಪಂಡ ಕಾಲಿಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದರಿಂದ ನಮ್ರತಾ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದರು. ತನಿಷಾ ಬದಲು ಬೇರೆ ಯಾರಾದ್ರೂ ಅವರ ಪರವಾಗಿ ಆಡಬಹುದು ಎಂದು ಬಿಗ್ ಬಾಸ್ ಹೇಳಿದ್ದಕ್ಕೆ, ಅದರಂತೆ ನಮ್ರತಾ ಅವರು ತನಿಷಾ ಪರ ಆಟ ಆಡಿದ್ದರು. ಕೊನೆವರೆಗೂ ನಮ್ರತಾ ಸಖತ್ ಆಗಿ ಆಡಿ, ಇದನ್ನು ಪರಿಗಣಿಸಿ ಮನೆಯ ಸ್ಪರ್ಧಿಗಳಿಗೆಲ್ಲ ನಮ್ರತಾ ಗೌಡಗೆ ಉತ್ತಮ ಪಟ್ಟ ಕೊಟ್ಟರು, ಆಮೇಲೆ ಕಿಚ್ಚ ಸುದೀಪ್ ಕೂಡ ಅವರಿಗೆ ಕಿಚ್ಚನ ಚಪ್ಪಾಳೆ ನೀಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News