Pension Scheme: ರೈತರ ಮೇಲೆ ಕೃಪೆ ತೋರಿದ ಈ ರಾಜ್ಯ ಸರ್ಕಾರ, ಪ್ರತಿತಿಂಗಳು ನೀಡಲಿದೆ 3000 ಪಿಂಚಣಿ!

Pension Scheme: ಉತ್ತರ ಪ್ರದೇಶದ ಯೋಗಿ ಸರ್ಕಾರ ರಾಜ್ಯದ ರೈತರಿಗೆ ಬಹುದೊಡ್ಡ ಉಡುಗೊರೆಯನ್ನು ನೀಡಿದೆ. ರಾಜ್ಯ ಸರ್ಕಾರ 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ 3000 ರೂ. ಪಿಂಚಣಿ ನೀಡಲಿದೆ (Business News In Kannada)  

Written by - Nitin Tabib | Last Updated : Feb 7, 2024, 08:24 PM IST
  • ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ರಾಜ್ಯ ಸರ್ಕಾರ ಈ ಯೋಜನೆಗಳನ್ನು ಪ್ರಾರಂಭಿಸಲು ಯೋಜಿಸಿದೆ.
  • ‘ರಾಜ್ಯ ಕೃಷಿ ಅಭಿವೃದ್ಧಿ ಯೋಜನೆ’ಗೆ 200 ಕೋಟಿ ರೂ. ಮೀಸಲಿಡಲಾಗಿದ್ದು,
  • ಎರಡನೇ ವಿಶ್ವಬ್ಯಾಂಕ್ ಬೆಂಬಲಿತ 'ಯುಪಿ ಅಗ್ರಿಸ್ ಯೋಜನೆ'ಗೆ 200 ಕೋಟಿ ರೂ.ನೀಡಲಾಗಿದೆ.
Pension Scheme: ರೈತರ ಮೇಲೆ ಕೃಪೆ ತೋರಿದ ಈ ರಾಜ್ಯ ಸರ್ಕಾರ, ಪ್ರತಿತಿಂಗಳು ನೀಡಲಿದೆ 3000 ಪಿಂಚಣಿ! title=

Pension Scheme: ದೇಶಾದ್ಯಂತ ಇರುವ ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ನಡೆಸುತ್ತಿವೆ. ಇದೇ ವೇಳೆ ಯೋಗಿ ಸರ್ಕಾರ ರಾಜ್ಯದ ರೈತರಿಗೆ ಭರ್ಜರಿ ಗಿಫ್ಟ್ ನೀಡಿದೆ. ರಾಜ್ಯ ಸರ್ಕಾರ 60 ವರ್ಷಕ್ಕಿಂತ ಮೇಲ್ಪಟ್ಟ ರೈತರಿಗೆ ಮಾಸಿಕ 3000 ರೂ. ಪಿಂಚಣಿ ನೀಡುವುದಾಗಿ ಹೇಳಿದೆ ಯೋಗಿ ಸರ್ಕಾರದ ಈ ನಿರ್ಧಾರದಿಂದ ರೈತರಲ್ಲಿ ಭಾರಿ ಸಂತಸದ ವಾತಾವರಣ ನಿರ್ಮಾಣಗೊಂಡಿದೆ.(Business News In Kannada)

ಯುಪಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಘೋಷಿಸಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ರೈತರು ಈ ಹಣವನ್ನು ಪಿಂಚಣಿಯಾಗಿ ಪಡೆಯಲಿದ್ದಾರೆ. ಇದರಿಂದ ಕೃಷಿಯ ಜೊತೆಗೆ ರೈತರು ತಮ್ಮ ಕಾಳಜಿಯನ್ನೂ ವಹಿಸಿಕೊಳ್ಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಯೋಜನೆ ಆರಂಭಿಸಿದೆ.

ವೃದ್ಧ ರೈತರಿಗೆ ಬೆಂಬಲ ನೀಡಲಾಗುವುದು
ಯೋಗಿ ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ವೃದ್ಧ ರೈತರಿಗೆ ಸಾಕಷ್ಟು ಪರಿಹಾರ ಸಿಗಲಿದೆ. ಇದರೊಂದಿಗೆ ರೈತರಿಗಾಗಿ 3 ಹೊಸ ಯೋಜನೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರೈತರಿಗಾಗಿ ಮುಖ್ಯಮಂತ್ರಿ ಖೇತ್ ಸುರಕ್ಷಾ ಯೋಜನೆ, ರಾಜ್ಯ ಕೃಷಿ ಅಭಿವೃದ್ಧಿ ಯೋಜನೆ ಮತ್ತು ಯುಪಿ ಅಗ್ರಿಸ್ ಯೋಜನೆಗಳನ್ನು ಸಹ ಪ್ರಾರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಸರಕಾರ 200 ಕೋಟಿ ನೀಡಿದೆ
ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ರಾಜ್ಯ ಸರ್ಕಾರ ಈ ಯೋಜನೆಗಳನ್ನು ಪ್ರಾರಂಭಿಸಲು ಯೋಜಿಸಿದೆ. ‘ರಾಜ್ಯ ಕೃಷಿ ಅಭಿವೃದ್ಧಿ ಯೋಜನೆ’ಗೆ 200 ಕೋಟಿ ರೂ. ಮೀಸಲಿಡಲಾಗಿದ್ದು, ಎರಡನೇ ವಿಶ್ವಬ್ಯಾಂಕ್ ಬೆಂಬಲಿತ 'ಯುಪಿ ಅಗ್ರಿಸ್ ಯೋಜನೆ'ಗೆ 200 ಕೋಟಿ ರೂ.ನೀಡಲಾಗಿದೆ.

ಇದನ್ನೂ ಓದಿ-StartUp News: ಕನ್ನಡದ ಕ್ರಿಕೆಟಿಗ ಕೆಎಲ್ ರಾಹುಲ್ ಸೇರಿದಂತೆ ಹಲವು ಬಂಡವಾಳ ಹೂಡಿಕೆದಾರರಿಂದ 83 ಕೋಟಿ ರೂ.ಗಳನ್ನು ಕಲೆಹಾಕಿದೆ ಈ ಸ್ಟಾರ್ಟ್ ಅಪ್!

ಈ ಯೋಜನೆಗೆ 60 ಕೋಟಿ ರೂ
ಇದಲ್ಲದೆ, ಮೂರನೇ ಯೋಜನೆಯು ರಾಜ್ಯದ ಅಭಿವೃದ್ಧಿ ಬ್ಲಾಕ್‌ಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಮತ್ತು ಸ್ವಯಂಚಾಲಿತ ಮಳೆ ಮಾಪನ ಸಾಧನಗಳನ್ನು ಸ್ಥಾಪಿಸಲು ಸಂಬಂಧಿಸಿದೆ. ಈ ಯೋಜನೆಗೆ 60 ಕೋಟಿ ರೂ.ಮೀಸಲಿರಿಸಲಾಗಿದೆ.

ಇದನ್ನೂ ಓದಿ-PM Kisan ಯೋಜನೆಯ ಫಲಾನುಭವಿಗಳಿಗೊಂದು ಮಹತ್ವದ ಅಪ್ಡೇಟ್, ಖಾತೆಗೆ 12,000 ಬರುವುದೋ ಅಥವಾ ಇಲ್ಲ? ಉತ್ತರ ನೀಡಿದ ಸರ್ಕಾರ!

ಮುಖ್ಯಮಂತ್ರಿ ಕೃಷಿ ಸುರಕ್ಷಾ ಯೋಜನೆಯೂ ಆರಂಭವಾಗಿದೆ
50 ಕೋಟಿ ನೀಡುವುದರೊಂದಿಗೆ ‘ಮುಖ್ಯಮಂತ್ರಿ ಕೃಷಿ ಸುರಕ್ಷಾ ಯೋಜನೆ’ಯನ್ನೂ ಆರಂಭಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಇದಲ್ಲದೆ ರೈತರ ಖಾಸಗಿ ಕೊಳವೆ ಬಾವಿಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಲು 2,400 ಕೋಟಿ ರೂ. ಮೀಸಲಿರಿಸಲಾಗಿದೆ. ಈ ಮೊತ್ತವು ಪ್ರಸಕ್ತ ಹಣಕಾಸು ವರ್ಷದಲ್ಲಿ ಒದಗಿಸಲಾದ ಬಜೆಟ್‌ಗಿಂತ ಶೇ 25ರಷ್ಟು ಹೆಚ್ಚಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News