ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಯಾರಿಗೂ ಹೇಳಬಾರದಂತೆ!ಆಗಲೇ ಅದೃಷ್ಟ ನಿಮ್ಮ ಕೈ ಹಿಡಿಯುವುದು !

Dreams Interpretation: ಸ್ವಪ್ನ ಶಾಸ್ರದ ಪ್ರಕಾರ ಕೆಲವೊಂದು ಕನಸುಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಹೋದರೆ ಆ ಕನಸುಗಳೇ ನಮಗೆ ಅದೃಷ್ಟ ತರುತ್ತವೆಯಂತೆ.

Written by - Ranjitha R K | Last Updated : May 13, 2024, 04:41 PM IST
  • ನಿದ್ರೆಯ ಸಮಯದಲ್ಲಿ ಕನಸು ಕಾಣುವುದು ಸಹಜ ಪ್ರಕ್ರಿಯೆ.
  • ಕನಸಿನಲ್ಲಿ ಕಾಣುವ ವಿಷಯಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳಿಗೆ ಸಂಬಂಧಿಸಿರುತ್ತವೆ
  • ನಾವು ಕಾಣುವ ಎಲ್ಲಾ ಕನಸುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದಂತೆ.
ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಯಾರಿಗೂ ಹೇಳಬಾರದಂತೆ!ಆಗಲೇ ಅದೃಷ್ಟ ನಿಮ್ಮ ಕೈ ಹಿಡಿಯುವುದು ! title=

Dreams Interpretation : ನಿದ್ರೆಯ ಸಮಯದಲ್ಲಿ ಕನಸು ಕಾಣುವುದು ಸಹಜ ಪ್ರಕ್ರಿಯೆ. ಸ್ವಪ್ನ ಶಾಸ್ತ್ರದ ಪ್ರಕಾರ,ಕನಸಿನಲ್ಲಿ ಕಾಣುವ ವಿಷಯಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳಿಗೆ ಸಂಬಂಧಿಸಿರುತ್ತವೆ.ನಾವು ಕಾಣುವ ಎಲ್ಲಾ ಕನಸುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದಂತೆ. ಸ್ವಪ್ನ ಶಾಸ್ರದ ಪ್ರಕಾರ ಕೆಲವೊಂದು ಕನಸುಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಹೋದರೆ ಆ ಕನಸುಗಳೇ ನಮಗೆ ಅದೃಷ್ಟ ತರುತ್ತವೆಯಂತೆ. 

ಪೋಷಕರು :
ನಿಮ್ಮ ಪೋಷಕರು ಕುಡಿಯಲು ನೀರು ಕೊಡುವುದನ್ನು ನಿಮ್ಮ ಕನಸಿನಲ್ಲಿ  ನೋಡಿದರೆ, ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕಂಡು ಕಂಡರೆ ಪ್ರಗತಿಯ ಬಾಗಿಲುಗಳು ಶೀಘ್ರದಲ್ಲೇ ತೆರೆದುಕೊಳ್ಳಲಿವೆ ಎಂದರ್ಥ. ಅಲ್ಲದೆ ಇದು ಯಶಸಿನ ಹಾದಿ ನಿಮ್ಮ ಮುಂದಿದೆ ಎನ್ನುವುದನ್ನು ಕೂಡಾ ಹೇಳುತ್ತದೆ. ಆದರೆ ಈ ಕನಸನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. 

ಇದನ್ನೂ ಓದಿ : ಈ ರಾಶಿಗಳ ಮೇಲೆ ಕುಬೇರ ದೇವನ ವಿಶೇಷ ಕೃಪೆ.. ಧನ ಸಂಪತ್ತಿಗೆ ಕೊರತೆಯೇ ಬಾರದು, ಧನ ಧಾನ್ಯ ಸಮೃದ್ಧಿಯಾಗಿ ಪ್ರತಿ ಕೆಲಸದಲ್ಲೂ ಜಯ ಸಿಗುವುದು!

 ಸಾವು : 
ನಿಮ್ಮ ಕನಸಿನಲ್ಲಿ ನೀವೇ ಸಾಯುವುದನ್ನು ಕಂಡರೆ ಅದು ಕೂಡಾ ಒಳ್ಳೆಯದು. ಶಾಸ್ತ್ರದ ಪ್ರಕಾರ,ಇದು ನಿಮ್ಮ ಆಯುಷ್ಯವನ್ನು ಹೆಚ್ಚಿಸುತ್ತದೆಯಂತೆ. ಮತ್ತು ಜೀವನದಲ್ಲಿ ಸಂತೋಷವನ್ನು ತರುತ್ತದೆ.ಈ ಕನಸನ್ನು ಕೂಡಾ ಯಾರೊಂದಿಗೂ ಹಂಚಿಕೊಳ್ಳಬಾರದು. 

ಬೆಳ್ಳಿ ತುಂಬಿದ ಕಲಶ : 
ನಿಮ್ಮ ಕನಸಿನಲ್ಲಿ ಬೆಳ್ಳಿ ತುಂಬಿದ ಕಲಶ ನೋಡಿದರೆ ನಿಮ್ಮ ಜೀವನದಲ್ಲಿ ಎಲ್ಲವೂ ಸಂತೋಷಮಾಯವಾಗಿರಲಿದೆ ಎಂದರ್ಥ.ಶೀಘ್ರದಲ್ಲೇ ಕೆಲವು ದೊಡ್ಡ ಸಮಸ್ಯೆ ಕೂಡಾ ಬಗೆಹರಿಯಲಿದೆ ಎನ್ನುವುದನ್ನು ಕೂಡಾ ಅರ್ಥ ಮಾಡಿಕೊಳ್ಳಬೇಕು.

ಉದ್ಯಾನವನ್ನು ನೋಡುವುದು : 
ಕನಸಿನಲ್ಲಿ ಉದ್ಯಾನವನ್ನು ನೋಡಿದರೆ ಭವಿಷ್ಯದಲ್ಲಿ ಆರ್ಥಿಕ ಲಾಭವಾಗುತ್ತದೆ ಎನ್ನುವುದನ್ನು ಹೇಳುತ್ತದೆ. ಕನಸಿನ ಶಾಸ್ತ್ರದ ಪ್ರಕಾರ,ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ ಎಂದರ್ಥ. 

ಇದನ್ನೂ ಓದಿ : ನಿಮ್ಮ ಕೈಯಲ್ಲಿ ಈ ಹಸ್ತರೇಖೆಯಿದ್ದರೆ ವೈವಾಹಿಕ ಜೀವನದಲ್ಲಿ ನೆಮ್ಮದಿ ಭಂಗ ತಪ್ಪಿದ್ದಲ್ಲ...!

ನಿಮ್ಮ ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ಕಂಡರೆ,ಶೀಘ್ರದಲ್ಲೇ ನೀವು ಜೀವನದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು ಎಂದರ್ಥ. ಆದರೆ ಈ ಕನಸನ್ನು ಯಾರಿಗೂ ಹೇಳಬಾರದು. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News