Prabhas: ಇಷ್ಟು ವರ್ಷವಾದರೂ ಪ್ರಭಾಸ್‌ ಯಾಕೆ ಮದುವೆಯಾಗಿಲ್ಲ? ಸತ್ಯ ಬಿಚ್ಚಿಟ್ಟ ವೇಣು ಸ್ವಾಮಿ!

Prabhas Marriage: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಫ್ರಭಾಸ್‌ 44 ವರ್ಷವಾದರೂ ಯಾಕೆ ಇನ್ನು ಮಾದುವೆಯಾಗಿಲ್ಲ ಎಂಬುದರ ಬಗ್ಗೆ ಖ್ಯಾತ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.  

Written by - Zee Kannada News Desk | Last Updated : Mar 1, 2024, 10:46 AM IST
  • ನಟ ಪ್ರಭಾಸ್‌ಗೆ ಈ ಜನ್ಮದಲ್ಲಿ ಮದುವೆ ಆಗಲ್ಲ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ.
  • ವೇಣು ಸ್ವಾಮಿ ಈ ಹಿಂದೆ ಪ್ರಭಾಸ್ ಬಾಹುಬಲಿ ಬಳಿಕ ಪ್ರಭಾಸ್ ಮುಂದಿನ ಮೂರು ಸಿನಿಮಾಗಳು ಸೋಲೋದು ಪಕ್ಕಾ ಎಂದಿದ್ದರು.
  • ಟಾಲಿವುಡ್‌ ನಟ ಪ್ರಭಾಸ್‌ ನಟಿ ಅನುಷ್ಕಾ ಶೆಟ್ಟಿ ಜೊತೆಗೆ ಡೇಟಿಂಗ್ ಮಾಡ್ತಿದ್ದಾರೆ. ಇವರಿಬ್ಬರು ಇದೇ ವರ್ಷ ಮದುವೆಯಾಗ್ತಾರೆ ಎನ್ನಲಾಗಿತ್ತು.
Prabhas: ಇಷ್ಟು ವರ್ಷವಾದರೂ ಪ್ರಭಾಸ್‌ ಯಾಕೆ ಮದುವೆಯಾಗಿಲ್ಲ? ಸತ್ಯ ಬಿಚ್ಚಿಟ್ಟ ವೇಣು ಸ್ವಾಮಿ! title=

Venu Swamy Talks About Prabhas Marriage: ಭಾರತ ಚಿತ್ರರಂಗದ ಸೆಲೆಬ್ರಿಟಿಗಳ ಖ್ಯಾತ ಜ್ಯೋತಿಷಿಗಳಾದ  ವೇಣು ಸ್ವಾಮಿ ಭವಿಷ್ಯ ನಂಬುತ್ತಾರೆ. ಅಷ್ಟೇ ಅಲ್ಲದೆ ಇವರ ನುಡಿ ಕೇಳಲು ಸ್ಟಾರ್ ನಟ-ನಟಿಯರು ಭಯಪಡ್ತಾರೆ. ಇದಕ್ಕೆ ಕಾರಣ ಈ ಜ್ಯೋತಿಷಿ ಶಾಕಿಂಗ್ ಭವಿಷ್ಯ ನುಡಿಯುವುದರಲ್ಲಿ  ಸಿಕ್ಕಾಪಟ್ಟೆ ಫೇಮಸ್​. ಇದೀಗ ನಟ ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಬಗ್ಗೆ ಹೊಸ ಬಾಂಬ್‌ವೊಂದು ಹಾಕಿದ್ದಾರೆ.

ಹೌದು.. ನಟ ಪ್ರಭಾಸ್‌ಗೆ ಈ ಜನ್ಮದಲ್ಲಿ ಮದುವೆ ಆಗಲ್ಲ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇಷ್ಟು ಮಾತ್ರವಲ್ಲದೇ ಪ್ರಭಾಸ್‌ಗೆ ಯಾಕೆ ಮದುವೆ ಆಗಲ್ಲ ಎನ್ನುವ ವಿಚಾರ ಕೂಡ ನನಗೆ ಗೊತ್ತು. ಆದರೆ ನಾನು ಅದನ್ನು ಹೇಳುವುದಿಲ್ಲವೆಂದು ಹೇಳಿ ವೇಣು ಸ್ವಾಮಿ ಶಾಕ್‌ ನೀಡಿದ್ದಾರೆ. ಇದರ ಜೊತೆಗೆ ಪ್ರಭಾಸ್​ ಜಾತಕದಲ್ಲಿ ದೋಷವಿದೆ, ತಂದೆ ನಟ ಕೃಷ್ಣಂರಾಜು ಜಾತಕವೂ ನನಗೆ ಗೊತ್ತು. ಪ್ರಭಾಸ್‌ಗೆ ಮದುವೆ ಯೋಗವಿಲ್ಲವೆಂದು ಪದೇ ಪದೇ ನುಡಿದಿದ್ದಾರೆ.

ಇದನ್ನೂ ಓದಿ: Prabhas: ಬಾಡಿಗೆ ಮನೆಯಲ್ಲಿ ಪ್ರಭಾಸ್ ರಾಯಲ್ ಲೈಫ್... ತಿಂಗಳ ಹೌಸ್‌ ರೆಂಟ್‌ ಎಷ್ಟು ಗೊತ್ತಾ?

ವೇಣು ಸ್ವಾಮಿ ಈ ಹಿಂದೆ ಪ್ರಭಾಸ್ ಬಾಹುಬಲಿ ಬಳಿಕ ಪ್ರಭಾಸ್ ಮುಂದಿನ ಮೂರು ಸಿನಿಮಾಗಳು ಸೋಲೋದು ಪಕ್ಕಾ ಎಂದಿದ್ದರು. ಮತ್ತೆ ಪ್ರಭಾಸ್ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಎಂದಿದ್ರು. ಇವೆರಡು ಸಹ ನಿಜವಾಗಿತ್ತು. ಪ್ರಭಾಸ್‌ ಕೂಡ ವಿದೇಶದಲ್ಲಿ ಸರ್ಜರಿ ಮಾಡಿಸಿಕೊಂಡು ವಾಪಸ್ ಬಂದಿದ್ದರು. ಸದ್ಯ ಡಾರ್ಲಿಂಗ್‌ ಫ್ಯಾನ್ಸ್‌ ವೇಣು ಸ್ವಾಮಿ ಅಚ್ಚರಿಯ ಭವಿಷ್ಯ ಕೇಳಿ ಗಾಬರಿಯಾಗಿದ್ದಾರೆ. ಪ್ರಭಾಸ್ ವಿಚಾರದಲ್ಲಿ ಹೇಳಿದ್ದೆಲ್ಲಾ ನಿಜವಾದಂತೆ ಇದು ಕೂಡ ನಿಜವಾದ್ರೇಯೆಂದು ಚಿಂತಿಸುತ್ತಿದ್ದಾರೆ.

ಟಾಲಿವುಡ್‌ ನಟ ಪ್ರಭಾಸ್‌ ನಟಿ ಅನುಷ್ಕಾ ಶೆಟ್ಟಿ ಜೊತೆಗೆ ಡೇಟಿಂಗ್ ಮಾಡ್ತಿದ್ದಾರೆ. ಇವರಿಬ್ಬರು ಇದೇ ವರ್ಷ ಮದುವೆಯಾಗ್ತಾರೆ ಎನ್ನಲಾಗಿತ್ತು. ಇದರ ತಕ್ಕಂತೆ ಪ್ರಭಾಸ್ ಚಿಕ್ಕಮ್ಮ ಕೂಡ ಶೀಘ್ರದಲ್ಲೇ ಹಸೆಮಈ ನಟ ಹೆಸೆಮಣೆ ಏರ್ತಾರೆಂದು ಸುಳಿವು ನೀಡಿದ್ದರು. ಇತ್ತ ವೇಣು ಸ್ವಾಮಿ ಇದಕ್ಕೂ ಮುನ್ನ ಸಮಂತಾ-ನಾಗಚೈತನ್ಯ ಒಟ್ಟಿಗೆ ಇರಲ್ಲ. ಇಬ್ಬರಿಗೂ ಡಿವೋರ್ಸ್ ಆಗುತ್ತೆ ವಿಚ್ಛೇದನಕ್ಕೂ ಮೊದಲೇ ಹೇಳಿದ್ದರು. ಅದರಂತೆ ಭವಿಷ್ಯ ಕೂಡ ನಿಜವಾಗಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News