ಕೂಳಿಗೆ ದಂಡವಾಗಿದೆ, ಭೂಮಿಗೆ ಭಾರವಾಗಿದೆ ಈ ಸರ್ಕಾರ ಎಂದು ರಾಮನಗರದ ಚನ್ನಪಟ್ಟಣದಲ್ಲಿ ಸಿ .ಎಂ. ಇಬ್ರಾಹಿಂ ಹೇಳಿದ್ದಾರೆ. ಅಶೋಕ ನೀನು ಕೂತಿದಿಯಲ್ಲಾ ಬೆಳಗಾವಿ ಸುವರ್ಣಸೌಧ, ಆ ಸೌಧವನ್ನ ಕಟ್ಟಿಸಿದ್ದು ಈ ಹೆಚ್ಡಿ ಕುಮಾರಸ್ವಾಮಿ ಎಂದು ಗುಡುಗಿದ್ದಾರೆ.
2023ರ ವಿಧಾನಸಭೆ ಚುನಾವಣೆ ಜೆಡಿಎಸ್ ರಣಕಹಳೆ. ಚುನಾವಣೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ. ಮೊದಲನೇ ಹಂತವಾಗಿ 93 ಅಭ್ಯರ್ಥಿಗಳ ಪಟ್ಟಿ ರಿಲೀಸ್. ರಾಷ್ಟ್ರೀಯ ಪಕ್ಷ ಗಳಿಗಿಂತಲೂ ಮೊದಲೇ ಪಟ್ಟಿ ರಿಲೀಸ್. ಜೆಪಿ ಭವನದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ HDK. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಪರಿಷತ್ ಸದಸ್ಯರ ಬೋಜೇಗೌಡ ಭಾಗಿ
ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ಮಹೂರ್ತ ಇನ್ನೂ ಫಿಕ್ಸ್ ಆಗಿಲ್ಲ. ಆದ್ರೆ ಪರ ವಿರೋಧ ಚರ್ಚೆಗಳು, ಆರೋಪ ಪ್ರತ್ಯಾರೋಪಗಳ ಸುರಿಮಳೆಗೆ ಕೊನೆಯಿಲ್ಲ. ನಿನ್ನೆಯಷ್ಟೇ ವೀರಶೈವರು ವಾಸು ಪರ ಕ್ಯಾಂಪೇನ್ಗೆ ಇಳಿದಿದ್ದರು. ಲಿಂಗಾಯಿತ ಮತ್ತೊಂದು ಗುಂಪು ಶಾಸಕರ ವಿರುದ್ಧ ತಿರುಗಿ ಬಿದ್ದಿದೆ.
ತುಮಕೂರಿನಲ್ಲಿ ಚುನಾವಣೆಗೂ ಆಣೆ ಪ್ರಮಾಣ ರಾಜಕೀಯ ಶುರುವಾಗಿದೆ. ಆಣೆ ಪ್ರಮಾಣದ ಮೂಲಕ ಮತಬೇಟೆಗೆ ಮುಂದಾದ ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿ ಯುವ ಘಟಕ ಟಾಂಗ್ ಕೊಟ್ಟಿದೆ. ಅಲ್ಲದೆ ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ದೂರು ನೀಡಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗುಬ್ಬಿ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಗುಬ್ಬಿ ಕಾಂಗ್ರೆಸ್ ಮುಖಂಡರಿಗೆ ತಮ್ಮದೇ ಸಮುದಾಯದ ಲಿಂಗಾಯಿತ ಹಾಗೂ ಕುರುಬ ಮುಖಂಡರು ಕೂಡ ತಿರುಗೇಟು ಕೊಟ್ಟಿದ್ದಾರೆ
Deve Gowda met Prime Minister Modi : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಹಾಲಿ ಮತ್ತು ಮಾಜಿ ಪ್ರಧಾನಿಗಳು ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ.
ಲಕ್ಷ್ಮೇಶ್ವರಕ್ಕೆ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗ್ತೀದಿನಿ. ಪಂಚ ರತ್ನ ಕ್ಕೆ ಹೋದ ಕಡೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.ಜನೇವರಿ 3 ರಿಂದ ಬೀದರ್ ಭಾಗದಿಂದ ಕಾರ್ಯಕ್ರಮ ಆರಂಭವಾಗತ್ತೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಶ್ರೀನಿವಾಸ್ ಕಾಂಗ್ರೆಸ್ ಸೇರುವುದನ್ನು ವಿರೋಧಿಸಿ ಇದೀಗ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಕೋಲಾರದ ಕೆಜಿಎಫ್ನಲ್ಲಿ ಪಂಚರತ್ನ ಸಮಾವೇಶ ಕಾರ್ಯಕ್ರಮದ ನಂತರದಲ್ಲಿ ಆಯೋಜಕರ ಮೇಲೆ ಕಾರ್ಯಕರ್ತರ ಆಕ್ರೋಶ. ಮಧ್ಯಾಹ್ನ 12 ಗಂಟೆಗೆ ಕರೆತಂದು ಊಟ ಕೊಟ್ಟಿಲ್ಲ. ಕೊನೆಪಕ್ಷ ಕುಡಿಯೋದಕ್ಕೆ ನೀರು ಕೊಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಗುಬ್ಬಿಯಲ್ಲಿ ಸ್ಪರ್ಧಿಸುವಂತೆ ಹೆಚ್ಡಿಕೆಗೆ ಎಸ್.ಆರ್. ಶ್ರೀನಿವಾಸ್ ಆಹ್ವಾನ ವಿಚಾರ. ಕ್ಷೇತ್ರ ಹುಡಿಕೊಂಡು ಹೋಗೋಕೆ ನಾನೇನ್ ಟೂರಿಂಗ್ ಟಾಕೀಸಾ..? ನಾನು ಎಲ್ಲಿ ನಿಲ್ಲಬೇಕು ಅಂತಾ ಅವರ ಪರ್ಮಿಷನ್ ತಗೊಂಡು ನಿಲ್ಲಬೇಕಾ? ನಾನ್ ಎಲ್ಲಿ ನಿಲ್ಬೇಕು ಅಂತ ಜನ ತೀರ್ಮಾನಿಸ್ತಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ದೇವೇಗೌಡರ ಹೆಸರಿಗೆ ಮಸಿ ಬಳಿಯಲು ಅವರ ಕುಟುಂಬದವರು ಮಾಡುತ್ತಿರುವ ಅಕ್ರಮ, ದಬ್ಬಾಳಿಕೆಯ ಬಗ್ಗೆ ಗೊತ್ತಿದ್ದರೂ ಹೊಳೆನರಸೀಪುರ ಕ್ಷೇತ್ರದ ಜನರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ನಾನು ಅವರ ವಿರುದ್ಧ ಬರುವ ಚುನಾವಣೆಯಲ್ಲಿ ಬಿಜೆಪಿ ಅಥವಾ ಪಕ್ಷೇತರವಾಗಿಯಾದರೂ ಸ್ಪರ್ಧಿಸಿ ಗೆದ್ದು ಶಾಸಕನಾಗುತ್ತೇನೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.
HDK ಸಿಎಂ ಆದ್ರೆ ನಾನು ಈ ಭಾಗದ ಸಚಿವನಾಗುತ್ತೇನೆ. ಹೆಬ್ಬುರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡ್ತೀನಿ. ಹೆಬ್ಬೂರು ಅತಿ ಹೆಚ್ಚು ಪಂಚಾಯತಿಗಳನ್ನು ಒಳಗೊಂಡಿದೆ ಎಂದು ತುಮಕೂರಲ್ಲಿ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.